Advertisement

ತಾಂತ್ರಿಕ ದೋಷ; ಮಂಡ್ಯದಲ್ಲಿ ಐಎಎಫ್ ನ MI 17 ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

09:49 AM Oct 03, 2019 | Nagendra Trasi |

ಬೆಂಗಳೂರು: ಭಾರತೀಯ ವಾಯುಸೇನೆಯ(ಐಎಎಫ್) ಎಂಐ 17 ಹೆಲಿಕಾಪ್ಟರ್ ಬುಧವಾರ ತುರ್ತು ಭೂಸ್ಪರ್ಶದ ಮೂಲಕ ಲ್ಯಾಂಡಿಂಗ್ ಆದ ಘಟನೆ ಮಂಡ್ಯದಲ್ಲಿ ನಡೆದಿದೆ.

Advertisement

ದಿಢೀರ್ ಭೂಸ್ಪರ್ಶದಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ವರದಿ ತಿಳಿಸಿದೆ. ರಕ್ಷಣಾ ಪಿಆರ್ ಒ ಮಾಹಿತಿ ಪ್ರಕಾರ, ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶವಾಗಿರುವುದಾಗಿ ವಿವರಿಸಿದೆ.

ಮೈಸೂರು ದಸರಾಕ್ಕಾಗಿ ನಿಯೋಜನೆಗೊಂಡಿದ್ದ ಐಎಎಫ್ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಮುಂಜಾಗ್ರತಾ ಕ್ರಮವಾಗಿ ತುರ್ತಾಗಿ ಲ್ಯಾಂಡಿಂಗ್ ಮಾಡಲಾಗಿತ್ತು. ತಾಂತ್ರಿಕ ದೋಷ ಸರಿಪಡಿಸಲಾಗಿದ್ದು, ಹೆಲಿಕಾಪ್ಟರ್ ಮೈಸೂರಿಗೆ ತೆರಳಿರುವುದಾಗಿ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next