Advertisement

IAF ಕಾಪ್ಟರ್‌ ತುರ್ತು ಭೂ ಸ್ಪರ್ಶ

11:41 PM May 29, 2023 | Team Udayavani |

ಹೊಸದಿಲ್ಲಿ: ಭಾರತೀಯ ವಾಯುಪಡೆಯ ಯುದ್ಧ ಕಾಪ್ಟರ್‌ ಅಪಾಚೆ ಸೋಮವಾರ ಮಧ್ಯಪ್ರದೇಶದ ಭಿಂದ್‌ನ ಬಳಿ ತುರ್ತು ಭೂ ಸ್ಪರ್ಶ ಮಾಡಿದೆ. ಇದರಿಂದ ಯಾವುದೇ ಅವಘಡ ಸಂಭವಿಸಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಎಎಚ್‌-64 ಅಪಾಚೆ ಕಾಪ್ಟರ್‌ನಲ್ಲಿ ಸಣ್ಣದೊಂದು ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಬೆಳಗ್ಗೆ 8.45ಕ್ಕೆ ಭಿಂದ್‌ ಪ್ರದೇಶದಲ್ಲಿ ಕೂಡಲೇ ಮುಂಜಾಗ್ರತ ಕ್ರಮವಾಗಿ ಕಾಪ್ಟರ್‌ಅನ್ನು ತುರ್ತಾಗಿ ಲ್ಯಾಂಡಿಂಗ್‌ ಮಾಡಲಾಗಿದೆ. ಕಾಪ್ಟರ್‌ನಲ್ಲಿದ್ದ ಸಿಬಂದಿ ಸುರಕ್ಷಿತವಾಗಿದ್ದು, ಕಾಪ್ಟರ್‌ಗೂ ಯಾವುದೇ ಹಾನಿ ಸಂಭವಿಸಿಲ್ಲವೆಂದು ಐಎಎಫ್ ಟ್ವೀಟ್‌ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next