Advertisement

Kejriwal ರಾಜಕೀಯ ಬೇಡ ಎಂದು ಎಚ್ಚರಿಸಿದ್ದೆ: ಅಣ್ಣ ಹಜಾರೆ

01:20 AM Sep 16, 2024 | Team Udayavani |

ರಾಲೇಗಣ ಸಿದ್ದಿ: ರಾಜಕೀಯ ಪ್ರವೇಶ ಬೇಡ ಎಂದು ಕೇಜ್ರಿವಾಲ್‌ಗೆ ಎಚ್ಚರಿಸಿದ್ದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿ ದ್ದಾರೆ. ಮಹಾರಾಷ್ಟ್ರದ ರಾಲೇಗಣ ಸಿದ್ದಿ ಯಲ್ಲಿ ಮಾತಾಡಿದ ಅವರು, ಸಮಾಜ ಸೇವೆ ಮಾಡಿದರೆ ದೊಡ್ಡ ಮನುಷ್ಯನಾಗುವ ಅವಕಾಶ ಸಿಗಲಿದೆ. ಜತೆಗೆ ಸಂತೋಷವೂ ಸಿಗಲಿದೆ ಎಂದಿದ್ದೆ. ಆದರೆ ಅವರು ರಾಜ ಕೀಯ ಸೇರಿದರು. ಏನು ಬೇಕೋ ಅದು ಆಯಿತು’ ಎಂದು ಪರೋಕ್ಷವಾಗಿ ಜೈಲು ಸೇರಿದ್ದು ಮತ್ತು ರಾಜೀನಾಮೆ ವಿಚಾರವನ್ನು ಹಜಾರೆ ಪ್ರಸ್ತಾವಿಸಿದರು.

Advertisement

ಇದು ಗಿಮಿಕ್‌: ಕಾಂಗ್ರೆಸ್‌
“ರಾಜೀನಾಮೆ ನೀಡುವ ಕೇಜ್ರಿವಾಲ್‌ ಘೋಷಣೆ ಗಿಮಿಕ್‌’ ಎಂದು ದಿಲ್ಲಿಯ ಕಾಂಗ್ರೆಸ್‌ ನಾಯಕ ಸಂದೀಪ್‌ ದೀಕ್ಷಿತ್‌ ಟೀಕಿಸಿದ್ದಾರೆ. ಕೇಜ್ರಿವಾಲ್‌ ಮುಖ್ಯಮಂತ್ರಿ ಸ್ಥಾನ ತ್ಯಜಿಸಬೇಕು ಎಂದು ಹಲವು ಸಮಯದಿಂದ ಒತ್ತಾಯಿಸುತ್ತಿದ್ದೆವು. ಈಗ ಅವರ ಘೋಷಣೆ ಕೇವಲ ಗಿಮಿಕ್‌ ಆಗಿದೆ. ಜಾಮೀನು ಪಡೆದು ಬಿಡುಗಡೆಯಾದ ಸಿಎಂಗೆ ಕಚೇರಿಗೆ ತೆರಳಬಾರದು, ಕಡತಗಳಿಗೆ ಸಹಿ ಹಾಕಬಾರದು ಎಂದು ವಿಧಿಸಿರುವ ನಿರ್ಬಂಧ ಮೊದಲನೇಯದ್ದು ಎನಿಸುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next