Advertisement

ಸಚಿವ ಸ್ಥಾನಕ್ಕಾಗಿ 5 ಬಾರಿಯ ಶಾಸಕ ರಾಜಶೇಖರ ಪಾಟೀಲ್‌ ಬಿಗಿ ಪಟ್ಟು

02:15 PM May 22, 2018 | |

ಬೆಂಗಳೂರು: ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ  ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಾ ಹೋಗಿದ್ದು ,ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದೆ. ಹಿರಿಯ ಶಾಸಕ, ಹುಮ್ನಾಬಾದ್‌ ಕ್ಷೇತ್ರದಿಂದ 5 ನೇ ಬಾರಿ ಆಯ್ಕೆಯಾಗಿರುವ  ರಾಜಶೇಖರ್‌ ಪಾಟೀಲ್‌ ಅವರು ತನಗೆ ಈ ಬಾರಿ ಸಚಿವ ಸ್ಥಾನ ನೀಡಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. 

Advertisement

ನನ್ನ ಹಿರಿತನ ಮತ್ತು ಬೀದರ್‌ ಜಿಲ್ಲಾ ಕೋಟಾದ ಅಡಿಯಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್‌ ನಾಯಕರನ್ನು ಒತ್ತಾಯಿಸಿದ್ದಾರೆ. ಪಾಟೀಲ್‌ ಅವರ ಅಭಿಮಾನಿಗಳು ಈ ಬಾರಿ ಸಚಿವ ಸ್ಥಾನ ನೀಡಲೇ ಬೇಕು ಎಂದು ಒತ್ತಾಯಿಸಿದ್ದಾರೆ. 

ರಾಜಶೇಖರ್‌ ಪಾಟೀಲ್‌ ಅವರ ಮನವೊಲಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. 

ರಾಜಶೇಖರ್‌ ಅವರು 30 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದು ಬಂದಿದ್ದರು.ಕಳೆದ ಬಾರಿಯೂ ಕೊನೆಯ ಬಾರಿ ಸಿದ್ದರಾಮಯ್ಯ ಅವರ ಸಂಪುಟ ವಿಸ್ತರಣೆ ವೇಳೆಯೂ ರಾಜಶೇಖರ್‌ ಅವರ ಹೆಸರು ಕೇಳಿ ಬಂದಿದ್ದು ಕೊನೆ ಕ್ಷಣದಲ್ಲಿ ತಪ್ಪಿ ಹೋಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next