Advertisement

ನನಗೂ ಜೀವ ಬೆದರಿಕೆ ಪತ್ರಗಳು ಬಂದಿವೆ: ಬಿ.ಟಿ. ಲಲಿತಾ ನಾಯಕ್

10:32 PM Oct 24, 2022 | Team Udayavani |

ದಾವಣಗೆರೆ: ದಾವಣಗೆರೆಯಿಂದ ಎರಡು ಸಹಿತ ನನಗೆ ಹಲವಾರು ಜೀವ ಬೆದರಿಕೆ ಪತ್ರಗಳು ಬಂದಿವೆ. ಸಾವು ಬರುವುದಾದರೇ ಇಂದೇ ಬರಲಿ. ನಾನು ಸಾಯುವ ತನಕ ಮಾತನಾಡುತ್ತೇನೆ. ಕೆಲಸ ಮಾಡುತ್ತೇನೆ ಎಂದು ಜನತಾ ಪಾರ್ಟಿ ರಾಜ್ಯಾಧ್ಯಕ್ಷೆ, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ದಾವಣಗೆರೆಯಲ್ಲಿ ಮಾತನಾಡಿ ಹೋದ ಬಳಿಕ ಜೀವ ಬೆದರಿಕೆ ಪತ್ರ, ಕರೆಗಳು ಬಂದಿವೆ. ಕೊಲೆಯಾಗುವ ದಿನ ನೋಡೋಣ. ಅಲ್ಲಿಯ ವರೆಗೆ ನಾನು ಕೆಲಸ ಮಾಡುತ್ತೇನೆ. ನಟ ಚೇತನ್‌ ದೈವಾರಾಧನೆ ಬಗ್ಗೆ ಮಾತನಾಡಿದ್ದಕ್ಕೆ ಎಷ್ಟೊಂದು ಆಕ್ರೋಶ ವ್ಯಕ್ತವಾಯಿತು. ದೈವಾರಾಧನೆ ಪುರೋಹಿತ ಶಾಹಿಯದ್ದಲ್ಲ. ಆದಿವಾಸಿಗಳದ್ದು. ಮನುಷ್ಯರ ಕೂಗು ದೇವರ ಸ್ವರೂಪದಲ್ಲಿ ಕಾಣುತ್ತದೆ. ಯಾರಾದರೂ ದೇವರನ್ನು ಕೂಡಿ ಹಾಕಲು ಸಾಧ್ಯವೆ? ಮೌಡ್ಯ ಬಿತ್ತುವ ದೇವಸ್ಥಾನಗಳ ನಿರ್ಮಾಣಕ್ಕಿಂತಲೂ ಗ್ರಂಥಾಲಯ, ಶಾಲೆ ನಿರ್ಮಾಣವಾಗಬೇಕು.

ಜನತಾ ಪಾರ್ಟಿ ಬರೀ ರಾಜಕೀಯ ಪಕ್ಷ ಅಲ್ಲ, ಮನುಷ್ಯರನ್ನು ಬೆಸೆಯುವ ಸಾಂಸ್ಕೃತಿಕ ಕೇಂದ್ರ. ಎಲ್ಲ ಪ್ರಗತಿಪರ ಚಿಂತಕರು ಶೇ.100ರಷ್ಟು ಪರಿಪೂರ್ಣರಲ್ಲ. ಕೆಲವರಲ್ಲಿ ಜಾತಿ, ಧರ್ಮದ ವಿಚಾರಗಳಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next