Advertisement

ನಾನು-ಸಿದ್ದು ವೈರಿಗಳಲ್ಲ

10:21 PM Dec 14, 2019 | Team Udayavani |

ಬೆಂಗಳೂರು: “ನಾನು ಮತ್ತು ಸಿದ್ದರಾಮಯ್ಯ ವೈರಿಗಳಲ್ಲ. ಶತ್ರುತ್ವ ಅಂದರೆ ಇಂಡಿಯಾ, ಪಾಕಿಸ್ತಾನದ್ದು. ನಾನು, ಸಿದ್ದರಾಮಯ್ಯ ಇಂಡಿಯಾ, ಪಾಕಿಸ್ತಾನವಲ್ಲ. ನನ್ನ ಹಾಗೂ ಸಿದ್ದರಾಮಯ್ಯರನ್ನು ಶತ್ರುಗಳು ಎಂದು ಕರೆಯಬೇಡಿ’ ಎಂದು ಅನರ್ಹ ಶಾಸಕ ಎಚ್‌.ವಿಶ್ವನಾಥ್‌ ಹೇಳಿದ್ದಾರೆ.

Advertisement

ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿ ನಂತರ ಮಾತನಾಡಿದ ಅವರು, ಚುನಾವಣಾ ರಾಜಕೀಯ ಬೇರೆ, ಸ್ನೇಹ ಬೇರೆ. ನಾವು ಬೆನ್ನಿಗೆ ಚೂರಿ ಹಾಕಿದವರು ಎಂದು ಮಾಧ್ಯಮಗಳು ಹೇಳುತ್ತವೆ. ಆದರೆ, ರಾಷ್ಟ್ರದಲ್ಲಿ, ರಾಜ್ಯದಲ್ಲಿ ಯಾರೂ ಪಕ್ಷಾಂ ತರ ಮಾಡಿಯೇ ಇಲ್ಲವೇ?. ನಮ್ಮ ಯೋಚನಾ ಲಹರಿ ಬೇರೆ ಇರಬಹುದು. ಆದರೆ, ನಾವು ಶತ್ರುಗಳಲ್ಲ. ನನಗೆ ಸಿದ್ದರಾಮಯ್ಯ, ಯಡಿಯೂ ರಪ್ಪ ಹಾಗೂ ಕುಮಾರಸ್ವಾಮಿಯವರ ಮೇಲೂ ಪ್ರೀತಿ ಇದೆ ಎಂದರು.

ಹಠ ಇರದೇ ಹೋದರೆ ರಾಜಕೀಯದಲ್ಲಿ ಏನು ಸಿಗುತ್ತದೆ?. ಭಾರತದಲ್ಲಿ ಇಂದಿರಾ ಗಾಂಧಿಯೇ ಸೋತಿದ್ದಾರೆ. ಸೋಲು, ಗೆಲುವು ರಾಜಕೀಯದಲ್ಲಿ ಸಾಮಾನ್ಯ. ರಾಜಕೀಯದಲ್ಲಿ ನಿವೃತ್ತಿ ಇಲ್ಲ. ನನ್ನ ಉಸಿರು ಇರುವವರೆಗೂ ರಾಜಕೀಯದಲ್ಲಿ ಇರುತ್ತೇನೆ. ಸೋತರೂ ದೇವೇಗೌಡರು ರಾಜಕೀಯದಲ್ಲಿ ಇಲ್ವಾ?. ನಾವು ಅವರ ಹಾಗೆ ರಾಜಕೀಯ ಮಾಡುತ್ತೇವೆ ಎಂದರು.

ಆರೋಗ್ಯ ವಿಚಾರಣೆ: ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶನಿವಾರವೂ ರಾಜಕೀಯ ನಾಯಕರು ಹಾಗೂ ಮಠಾಧೀಶರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಆರೋಗ್ಯ ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಅನರ್ಹ ಶಾಸಕ ಎಚ್‌.ವಿಶ್ವನಾಥ್‌, ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ, ಮಾಜಿ ಸಚಿವ ಎಚ್‌.ಎಂ.ರೇವಣ್ಣ, ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವ ಮೃತ್ಯುಂಜಯ ಸ್ವಾಮೀಜಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next