Advertisement

ಮರ ಸುರಂಗ ಮಾಡೋಣ ಎಂದು ನಿತಿನ್‌ ಗಡ್ಕರಿಗೆ ಮಹೀಂದ್ರಾ ಕರೆ- Viral Video

12:26 AM Aug 29, 2022 | Team Udayavani |

ನವದೆಹಲಿ: ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಸಂಸ್ಥೆಯ ಮುಖ್ಯಸ್ಥ ಆನಂದ್‌ ಮಹೀಂದ್ರಾ ಅವರು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಿಗೆ ಮನವಿಯೊಂದನ್ನು ಮಾಡಿದ್ದಾರೆ.

Advertisement

ಸಾಲು ಮರಗಳಿಂದಾಗಿ ಸುರಂಗದಂತಾದ ರಸ್ತೆಯೊಂದರ ವಿಡಿಯೋವೊಂದನ್ನು ಹಂಚಿಕೊಂಡಿರುವ ಆನಂದ್‌ ಮಹೀಂದ್ರಾ ಅವರು, “ಗಡ್ಕರಿ ಅವರೇ, ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಿಸುತ್ತಿರುವ ರಸ್ತೆಗಳಲ್ಲಿ ಈ ರೀತಿಯ ಸುರಂಗಗಳನ್ನು ನಿರ್ಮಿಸೋಣವೇ?’ ಎಂದು ಕೇಳಿದ್ದಾರೆ.

ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹಲವರು ತಮಗೆ ಗೊತ್ತಿರುವ ಮರಗಳ ಸುರಂಗಗಳ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next