Advertisement

ಡಿಕೆಶಿಯಷ್ಟು ಹಿತೈಷಿ ನನಗೆ ಯಾರೂ ಇಲ್ಲ: ಎಚ್‌ಡಿಕೆ ವ್ಯಂಗ್ಯ

11:20 PM Mar 31, 2024 | Team Udayavani |

ಬೆಂಗಳೂರು: ಪಾಪ ಡಿಸಿಎಂ ಡಿ.ಕೆ.ಶಿವಕುಮಾರ್‌ ನನಗೆ ವೈರಿಯಲ್ಲ. ಅವರು ನನ್ನ ದೊಡ್ಡಮಟ್ಟದ ಹಿತೈಷಿ, ಅವರಷ್ಟು ಹಿತೈಷಿ ನನಗೆ ಯಾರೂ ಇಲ್ಲ ಎಂದು ಎಚ್‌.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.

Advertisement

ಅಮೃತ ಕೊಟ್ಟವರಿಗೆ ವಿಷವೇ ಎಂದು ಪ್ರಶ್ನಿಸಿದ್ದ ಶಿವಕುಮಾರ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಐದು ವರ್ಷ ಕಾಲ ಸರಕಾರ ನಡೆಸಲಿ ಎಂದು 38 ಶಾಸಕರಿರುವ ಪಕ್ಷಕ್ಕೆ ಸಿಎಂ ಸ್ಥಾನ ಕೊಟ್ಟೆವು ಎಂದು ಅವರು ಪದೇಪದೆ ಹೇಳುತ್ತಿದ್ದಾರೆ. ಐದು ವರ್ಷ ನಾಮಕಾವಾಸ್ತೆಯಾಗಿ ನಮಗೆ ಅಧಿಕಾರ ಕೊಟ್ಟರು. ಒಂದು ದಿನವೂ ನೆಮ್ಮದಿಯಾಗಿ ಸರಕಾರ ನಡೆಸಲು ಬಿಡಲಿಲ್ಲ. ಎಷ್ಟು ಚಿತ್ರಹಿಂಸೆ ಕೊಟ್ಟರು ಎಂಬುದು ನನಗಷ್ಟೇ ಗೊತ್ತು. ಅದಕ್ಕೇ ಸಮ್ಮಿಶ್ರ ಸರಕಾರ ಬಿದ್ದಿತೇ ಹೊರತು ಅದಕ್ಕೆ ನಾನು ಕಾರಣವಲ್ಲ ಎಂದು ತಿರುಗೇಟು ಕೊಟ್ಟರು.

ನನ್ನನ್ನು ಮುಖ್ಯಮಂತ್ರಿ ಮಾಡಿಕೊಂಡು ಯಾವ ರೀತಿ ನಡೆಸಿಕೊಂಡರು, ಎಷ್ಟು ಅಪಮಾನ ಮಾಡಿದರು ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಚಳಿ, ಮಳೆ, ಗಾಳಿ ಯಾವುದನ್ನೂ ಲೆಕ್ಕಿಸದೇ ನನ್ನ ಜತೆ ನಿಂತುಕೊಂಡರು ನೋಡಿ. ಪಾಪ, ಅವರು ನನಗೆ ಸಹಕಾರ ನೀಡಿದ್ದರಲ್ಲ, ಅದಕ್ಕೆ ಹದಿನಾಲ್ಕೇ ತಿಂಗಳಿಗೆ ಸರಕಾರ ಹೋಗಿದ್ದು. ಸರಕಾರ ಬಂದ ಆರಂಭದಲ್ಲಿಯೇ ಡಿ.ಕೆ.ಶಿವಕುಮಾರ್‌ ಮತ್ತು ರಮೇಶ್‌ ಜಾರಕಿಹೋಳಿ ಘರ್ಷಣೆ ಮಾಡಿಕೊಂಡರಲ್ಲ, ಅದೇನು ಸರಕಾರವನ್ನು ಉಳಿಸಲು ಮಾಡಿದ್ದೇ? ಯಾರು ಶತ್ರು, ಯಾರು ಹಿತೈಷಿ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next