Advertisement

ನನಗೆ ಡಿಸಿಎಂ ಹುದ್ದೆ ಬೇಡ, ಅತೃಪ್ತರ ಮನವೊಲಿಕೆ ಚರ್ಚೆ ಆಗಿಲ್ಲ; ರಾಮಲಿಂಗಾ ರೆಡ್ಡಿ

09:18 AM Jul 21, 2019 | Team Udayavani |

ಬೆಂಗಳೂರು:ಅತೃಪ್ತರ ಮನವೊಲಿಕೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಇದೊಂದು ಸೌಜನ್ಯದ ಭೇಟಿ ಅಷ್ಟೇ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಜೆಡಿಎಸ್ ವರಿಷ್ಠ ದೇವೇಗೌಡರ ಜೊತೆ ಮಾತುಕತೆ ನಡೆಸಿದ ಬಳಿಕ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಶನಿವಾರ ರಾಮಲಿಂಗಾರೆಡ್ಡಿ ಅವರು ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ ಕೂಡಾ ಹಾಜರಿದ್ದರು.

ಮಾತುಕತೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನಗೆ ಡಿಸಿಎಂ ಹುದ್ದೆ ಬೇಡ. ನನಗೆ ಯಾವುದೇ ಆಸೆ, ಆಕಾಂಕ್ಷೆ ಇಲ್ಲ ಎಂದು ಹೇಳಿದ್ದೇನೆ. ಆಗಾಗ ದೇವೇಗೌಡರನ್ನು ಭೇಟಿ ಆಗುತ್ತಿದ್ದೆ. ಹಾಗೆ ಇವತ್ತು ಭೇಟಿಯಾಗಿದ್ದೇನೆ ಎಂದರು.

ನಾವು ಒಟ್ಟಾಗಿ ರಾಜೀನಾಮೆ ಕೊಟ್ಟಿದ್ದೇವು. ಆದರೆ ನಮ್ಮ ನಾಯಕರು, ಜನರ ಒತ್ತಡದಿಂದಾಗಿ ರಾಜೀನಾಮೆ ವಾಪಸ್ ಪಡೆದಿದ್ದೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next