Advertisement

ನಾನು ಆತ್ಮಹತ್ಯೆಗೆ ನಿರ್ಧರಿಸಿದ್ದೆ:ಎ.ಆರ್‌. ರೆಹಮಾನ್‌

10:45 AM Nov 05, 2018 | Team Udayavani |

ಮುಂಬಯಿ:  ತಾವು 25 ವರ್ಷದವರಾಗುವವರೆಗೂ ತಮ್ಮಲ್ಲಿ ಆತ್ಮಹತ್ಯೆಯ ಭಾವನೆ ಮೈದೋರಿತ್ತು. ಆದರೆ, ಆ ವೇಳೆ ಎದುರಿಸಿದ ಕಷ್ಟಗಳು ಮನಸ್ಸನ್ನು ಗಟ್ಟಿಗೊಳಿಸಿದವು. ಆನಂತರ, ನಿರ್ಭಯದಿಂದ ಜೀವನ ಮುಂದುವರಿಸಿದ್ದಾಗಿ ವಿಶ್ವವಿಖ್ಯಾತ ಸಂಗೀತ ನಿರ್ದೇಶಕ, ಆಸ್ಕರ್‌ ಪ್ರಶಸ್ತಿ ವಿಜೇತ ಎ.ಆರ್‌. ರೆಹಮಾನ್‌ ತಿಳಿಸಿದ್ದಾರೆ.

Advertisement

ಶನಿವಾರ ತಮ್ಮ ಆತ್ಮಕಥೆ, ನೋಟ್ಸ್‌ ಆಫ್ ಎ ಡ್ರೀಮ್‌: ದ ಆಥರೈಸ್ಡ್ ಬಯೋಗ್ರಫಿ ಆಫ್ ಎ.ಆರ್‌.ರೆಹಮಾನ್‌ ಬಿಡುಗಡೆ ವೇಳೆ ಮಾತನಾಡಿದ ಅವರು, “”ಚಿಕ್ಕ ವಯಸ್ಸಿನಲ್ಲಿ ತಂದೆ ತೀರಿ ಹೋದಾಗ ಬದುಕು ಅತಂತ್ರವಾಗಿತ್ತು. ನಂತರ ಸಾವು ಅಂತಿಮ ಸತ್ಯ. ಅದನ್ನು ಮೊದಲೇ ಸಂಧಿಸುವ ಅವಶ್ಯಕತೆಯಿಲ್ಲ ಎಂದು ಬದುಕಲು ನಿರ್ಧರಿಸಿದೆ” ಎಂದಿದ್ದಾರೆ. ಜತೆಗೆ, ದಿಲೀಪ್‌ ಕುಮಾರ್‌ ಎಂಬ ನನ್ನ ಮೂಲ ಹೆಸರನ್ನು ನಾನು ದ್ವೇಷಿಸುತ್ತಿದ್ದೆ. ಅದು ನನ್ನ ವ್ಯಕ್ತಿತ್ವಕ್ಕೆ ಹೊಂದುವುದಿಲ್ಲ ಎಂಬ ಭಾವನೆ ಬರುತ್ತಿತ್ತು ಎಂದೂ ಅವರು ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next