Advertisement

ತನ್ನ ಕಾರು ತಡೆದರೆಂದು ಪೊಲೀಸರಿಗೆ ಅಮಾನತು ಬೆದರಿಕೆ ಹಾಕಿದ ಬಿಹಾರ ಸಚಿವ !

07:59 PM Dec 02, 2021 | Team Udayavani |

ಪಾಟ್ನಾ: ರಾಜ್ಯ ಸಚಿವರೊಬ್ಬರು ರಸ್ತೆ ಮಧ್ಯೆಯೇ ಕಾರಿನಿಂದಿಳಿದು, ಪೊಲೀಸರೊಂದಿಗೆ ಜಗಳವಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.

Advertisement

ಇದೇ ವೇಳೆ, ಸರ್ಕಾರದ ಭಾಗವಾಗಿರುವ ತಮ್ಮನ್ನು ತಡೆದ ಪೊಲೀಸ್‌ ಅಧಿಕಾರಿಯನ್ನು ಕೆಲಸದಿಂದ ಅಮಾನತುಗೊಳಿಸುವವರೆಗೆ ತಾವು ವಿಧಾನಸಭೆಗೆ ಹೋಗುವುದಿಲ್ಲ ಎಂದು ಸಚಿವರು ಹಠ ಹಿಡಿದ ಘಟನೆಯೂ ನಡೆದಿದೆ.

ಬಿಹಾರದ ಸಚಿವ ಜೀವೇಶ್‌ ಮಿಶ್ರಾ ಅವರು ಗುರುವಾರ ವಿಧಾನಸಭೆಗೆ ತೆರಳುತ್ತಿದ್ದ ವೇಳೆ, ಟ್ರಾಫಿಕ್‌ ಪೊಲೀಸರು ಅವರ ಕಾರನ್ನು ತಡೆದಿದ್ದರು. ಅವರ ಕಾರನ್ನು ತಡೆದು, ಪೊಲೀಸ್‌ ಇಲಾಖೆಯ ಎಸ್‌ಪಿ ಮತ್ತು ಜಿಲ್ಲಾಧಿಕಾರಿ (ಡಿಎಂ) ಅವರ ಕಾರುಗಳನ್ನು ಹೋಗಲು ದಾರಿ ಮಾಡಿಕೊಡಲಾಗಿತ್ತು. ಇದರಿಂದಾಗಿ ಸಿಟ್ಟಿಗೆದ್ದ ಜೀವೇಶ್‌ ಸಿಟ್ಟಿಗೆದ್ದಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ:ಒಮಿಕ್ರಾನ್ ; ಆರೂ ಮಂದಿಯ ಮೇಲೆ ನಿಗಾ ಇಟ್ಟಿದ್ದೇವೆ: ಸಚಿವ ಡಾ.ಸುಧಾಕರ್

Advertisement

Udayavani is now on Telegram. Click here to join our channel and stay updated with the latest news.

Next