Advertisement

ನಾನು ಕುರುಬರಿಗೆ ಮಾತ್ರ ಮುಖ್ಯಮಂತ್ರಿ ಅಲ್ಲ:ಸಿದ್ದರಾಮಯ್ಯ 

02:32 PM Aug 27, 2017 | Team Udayavani |

ಬೆಂಗಳೂರು: ನಾನು ಅಹಿಂದ ವರ್ಗಕ್ಕೆ ಮಾತ್ರ ಮುಖ್ಯಮಂತ್ರಿ ಅಲ್ಲ . ರಾಜ್ಯದ ಆರೂವರೆ ಕೋಟಿ ಜನರಿಗೆ ಮುಖ್ಯಮಂತ್ರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಭಾನುವಾರ ಅರಮನೆ ಮೈದಾನದಲ್ಲಿ ನಡೆದ ಕುರುಬರ ಸಂಘದ ಸಮಾವೇಶವನ್ನುದ್ದೇಶಿ ಮಾತನಾಡಿದ ಸಿಎಂ ‘ನನ್ನನ್ನು ಕೆಲವರು ಅಹಿಂದ ವರ್ಗಕ್ಕೆ ಮಾತ್ರ ಸಿಎಂ ಎಂದು ವ್ಯಂಗ್ಯ ಮಾಡುತ್ತಾರೆ. ಆದರೆ ನಾನು ಎಲ್ಲಾ ವರ್ಗದ ಪರವಾಗಿ ಕೆಲಸ ಮಾಡಿದ್ದೇನೆ. ನನಗೆ ಅಹಿಂದ ನಾಯಕ ಎನ್ನುವುದರಲ್ಲಿ ಮುಜುಗರವಿಲ್ಲ. ಹಿಂದುಳಿದ ಮತ್ತು ಶೋಷಿತ ವರ್ಗದ ಪರವಾಗಿ ನಾನು ಕೆಲಸ ಮಾಡಿದ್ದೇನೆ ‘ ಎಂದರು. 

‘ಇತಿಹಾಸ ಗೊತ್ತಿದ್ದವರು ಇತಿಹಾಸ ನಿರ್ಮಿಸುತ್ತಾರೆ’ ಎಂದು ಅಂಬೇಡ್ಕರ್‌ ಹೇಳಿದ್ದರು ಎಂದು ಸಿಎಂ ಹೇಳಿದರು. 

‘ನಾನು ಆಕಸ್ಮಿಕವಾಗಿ ಕುರುಬ ಜನಾಂಗದಲ್ಲಿ ಹುಟ್ಟಿದೆ. ಆದರೆ ಆರುವರೆ ಕೋಟಿ ಜನರಿಗೆ ಮುಖ್ಯಮಂತ್ರಿಯಾಗಿದ್ದೇನೆ. ನಾವು ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ ಎನ್ನುವ ಕುರಿತು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ. ಶೋಷಿತ ವರ್ಗದಿಂದ ಬಂದವರು ಸಮಾಜಮುಖೀ ಆಗಿ ಕೆಲಸ ಮಾಡಬೇಕು’ ಎಂದರು. 

ಇದೇ ವೇಳೆ ‘ಸಾಮಾಜಿಕ ನ್ಯಾಯಕ್ಕೆ ದೊಡ್ಡ ಪೆಟ್ಟು ಕೊಡಲು ಕೇಂದ್ರ ಮುಂದಾಗಿದೆ’ ಎಂದು ಆರೋಪಿಸಿದರು. 

Advertisement

ರಾಯಣ್ಣ ಬ್ರಿಗೆಡ್‌ಗೆ ವ್ಯಂಗ್ಯ  

ಭಾಷಣದ ವೇಳೆ ವೇದಿಕೆಯಲ್ಲಿದ್ದ  ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸಂಚಾಲಕ, ಮಾಜಿ ಮೇಯರ್‌, ಬಿಜೆಪಿ ನಾಯಕ ವೆಂಕಟೇಶ್‌ ಮೂರ್ತಿ ಅವರ ಕಾಲೆಳೆದ ಸಿದ್ದರಾಮಯ್ಯ ವೆಂಕಟೇಶ ಮೂರ್ತಿ ಇಲ್ಲೆ ಇದ್ದಾನೆ,ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಮಾಡುತ್ತೇನೆ ಅಂತ ಹೋದರು. ಏನಾಯಿತೋ ವೆಂಕಟೇಶ? ‘ಬರೀ ರಾಯಣ್ಣ ಬ್ರಿಗೇಡ್‌ ಅಂತ ಹೊದ್ರೆ ಏನೂ ಆಗಲ್ಲ. ಸಂಗೋಳ್ಳಿ ರಾಯಣ್ಣ ಹೆಸರಲ್ಲಿ ನಾನು ಅನುದಾನ ನೀಡಿದ್ದೇನೆ’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next