Advertisement
ಭಾನುವಾರ ಅರಮನೆ ಮೈದಾನದಲ್ಲಿ ನಡೆದ ಕುರುಬರ ಸಂಘದ ಸಮಾವೇಶವನ್ನುದ್ದೇಶಿ ಮಾತನಾಡಿದ ಸಿಎಂ ‘ನನ್ನನ್ನು ಕೆಲವರು ಅಹಿಂದ ವರ್ಗಕ್ಕೆ ಮಾತ್ರ ಸಿಎಂ ಎಂದು ವ್ಯಂಗ್ಯ ಮಾಡುತ್ತಾರೆ. ಆದರೆ ನಾನು ಎಲ್ಲಾ ವರ್ಗದ ಪರವಾಗಿ ಕೆಲಸ ಮಾಡಿದ್ದೇನೆ. ನನಗೆ ಅಹಿಂದ ನಾಯಕ ಎನ್ನುವುದರಲ್ಲಿ ಮುಜುಗರವಿಲ್ಲ. ಹಿಂದುಳಿದ ಮತ್ತು ಶೋಷಿತ ವರ್ಗದ ಪರವಾಗಿ ನಾನು ಕೆಲಸ ಮಾಡಿದ್ದೇನೆ ‘ ಎಂದರು.
Related Articles
Advertisement
ರಾಯಣ್ಣ ಬ್ರಿಗೆಡ್ಗೆ ವ್ಯಂಗ್ಯ
ಭಾಷಣದ ವೇಳೆ ವೇದಿಕೆಯಲ್ಲಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಚಾಲಕ, ಮಾಜಿ ಮೇಯರ್, ಬಿಜೆಪಿ ನಾಯಕ ವೆಂಕಟೇಶ್ ಮೂರ್ತಿ ಅವರ ಕಾಲೆಳೆದ ಸಿದ್ದರಾಮಯ್ಯ ವೆಂಕಟೇಶ ಮೂರ್ತಿ ಇಲ್ಲೆ ಇದ್ದಾನೆ,ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡುತ್ತೇನೆ ಅಂತ ಹೋದರು. ಏನಾಯಿತೋ ವೆಂಕಟೇಶ? ‘ಬರೀ ರಾಯಣ್ಣ ಬ್ರಿಗೇಡ್ ಅಂತ ಹೊದ್ರೆ ಏನೂ ಆಗಲ್ಲ. ಸಂಗೋಳ್ಳಿ ರಾಯಣ್ಣ ಹೆಸರಲ್ಲಿ ನಾನು ಅನುದಾನ ನೀಡಿದ್ದೇನೆ’ ಎಂದರು.