Advertisement

ನಾನು ಎಚ್‌ಡಿಕೆಯಲ್ಲ: ಶಾಸಕ ಯೋಗೇಶ್ವರ್‌

06:10 AM Mar 30, 2018 | Team Udayavani |

ರಾಮನಗರ: ಇಷ್ಟ ಬಂದ ಹಾಗೆ ಎರಡು-ಮೂರು  ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತಾನು ಎಚ್‌.ಡಿ.ಕುಮಾರಸ್ವಾಮಿ ಅಲ್ಲ ಎಂದು ಶಾಸಕ ಸಿ.ಪಿ.ಯೋಗೇಶ್ವರ್‌ ಹೇಳಿದರು. 

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತನ್ನ ಸ್ಪರ್ಧೆ ಚನ್ನಪಟ್ಟಣದಲ್ಲಿ ಖಚಿತ. 20 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೂಲಿ ಮಾಡಿಕೊಂಡು ಬಂದಿದ್ದೇನೆ. ಜನರ ಆಶೀರ್ವಾದ ತಮ್ಮ ಮೇಲಿದೆ. ಕುಮಾರಸ್ವಾಮಿ ಅವರದ್ದು  ಸ್ವಂತ ಪಕ್ಷ. ಅವರು 224 ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಬಹುದು. ಆದರೆ, ತಮ್ಮದು ರಾಷ್ಟ್ರೀಯ ಪಕ್ಷ. ಹಲವು ನೀತಿ ನಿಬಂಧನೆಗಳಿವೆ. ಅಳೆದು ತೂಕ ಮಾಡಿ ಬಿಜೆಪಿಯಲ್ಲಿ ಟಿಕೆಟ್‌ ನೀಡಲಾಗುತ್ತದೆ. 

ದೇವೇಗೌಡರ ಕುಟುಂಬದ ಎದುರು ಸ್ಪರ್ಧೆ ಮಾಡುವುದು ಹೊಸದೇನೂ ಅಲ್ಲ. ಚುನಾವಣೆ ಕಠಿಣ ಅಥವಾ ಸುಲಭ ಎಂಬುದು ಮೇ 15ರಂದು ಮತಪೆಟ್ಟಿಗೆ ತೆರೆದ ಬಳಿಕ ತಿಳಿಯುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next