Advertisement

Hubli; ಕ್ಷೇತ್ರ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ; ಜಾರಕಿಹೊಳಿ ಹೇಳಿಕೆ ಬಗ್ಗೆ ಬೊಮ್ಮಾಯಿ

11:34 AM Mar 17, 2024 | Team Udayavani |

ಹುಬ್ಬಳ್ಳಿ: ಕ್ಷೇತ್ರ ಬದಲಾವಣೆಯಾಗುತ್ತವೆ ಎನ್ನುವುದರ ಬಗ್ಗೆ ನನಗೇನು ಮಾಹಿತಿಯಿಲ್ಲ. ರಮೇಶ ಜಾರಕಿಹೊಳಿ ಅವರು ಹೈಕಮಾಂಡ್ ಜೊತೆ ಸಂಪರ್ಕಲ್ಲಿರ ಬಹುದೇನೋ, ಹಾಗಾಗಿ ಹೇಳಿರಬಹುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಅವರು ಏನು ಹೇಳಿದ್ದಾರೆ ಎಂಬುವುದು ನನಗೆ ಗೊತ್ತಿಲ್ಲ. ಕ್ಷೇತ್ರ ಬದಲಾವಣೆಯಾಗುತ್ತವೆ ಎಂಬುವುದರ ಬಗ್ಗೆ ಅವರನ್ನೇ ಕೇಳಿದರೆ ಸ್ಪಷ್ಟತೆ ಸಿಗಬಹುದು ಎಂದರು.

ಕೆ.ಎಸ್‌.ಈಶ್ವರಪ್ಪ ಅವರು ಮನವೊಲಿಕೆಯಾಗಲಿದ್ದಾರೆ. ನಮ್ಮ ರಾಷ್ಟ್ರೀಯ ನಾಯಕರು ಅವರೊಂದಿಗೆ ಮಾತನಾಡಿ ಎಲ್ಲವನ್ನೂ ಸರಿ ಮಾಡುತ್ತಾರೆ. ಈಶ್ವರಪ್ಪ ಅವರು ಪಕ್ಷಕ್ಕೆ ನಿಷ್ಠೆಯುಳ್ಳವರು. ಬೇಸರ ಆಗಿರುವ ಕಾರಣಕ್ಕೆ ಸಿಟ್ಟು ಹೊರಹಾಕಿದ್ದಾರೆ. ಹಾಗಂತ ಪಕ್ಷದ ವಿರುದ್ಧ ಹೋಗುವುದಿಲ್ಲ. ಅವರು ಕೂಡ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಬೇಕು ಎಂಬುವುದು ಗುರಿ ಹೊಂದಿದ್ಧಾರೆ ಎಂದರು.

ಲೋಕಸಭಾ ಚುನಾವಣೆಗೆ ಪಕ್ಷವು ಈಗಾಗಲೇ ಪೂರ್ಣ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಇಂದಿನಿಂದ ಪ್ರಚಾರ ಕಾರ್ಯವನ್ನು ಧಾರವಾಡ ಲೋಕಸಭಾ ಕ್ಷೇತ್ರದ ಶಿಗ್ಗಾವಿಯಿಂದ ಆರಂಭಿಸುತ್ತೇನೆ. ನಾಳೆಯಿಂದ ಹಾವೇರಿ-ಗದಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ಕೈಗೊಳ್ಳುವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next