Advertisement

ನಾನು ಪಿತೂರಿಗೆ ಬಲಿಯಾಗಿದ್ದೇನೆ ಎಂದ ಬಂಧಿತ ಪಾರ್ಥ ಚಟರ್ಜಿ

05:28 PM Jul 29, 2022 | Team Udayavani |

ಕೋಲ್ಕತಾ : ಶಾಲಾ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ನಂತರ, ಟಿಎಂಸಿಯ ಎಲ್ಲಾ ಹುದ್ದೆಗಳಿಂದ ಮತ್ತು ಸಚಿವ ಸ್ಥಾನದಿಂದ ವಜಾಗೊಂಡ ಒಂದು ದಿನದ ನಂತರ, ಪಾರ್ಥ ಚಟರ್ಜಿ, ”ನನ್ನ ವಿರುದ್ಧ ಪಿತೂರಿ ಮಾಡಲಾಗಿದ್ದು, ಅದಕ್ಕೆ ಬಲಿಯಾಗಿದ್ದೇನೆ” ಎಂದು ಶುಕ್ರವಾರ ಹೇಳಿದ್ದಾರೆ.

Advertisement

69 ಹರೆಯದ ಹಿರಿಯ ರಾಜಕಾರಣಿ ಇ ಡಿ ವಶದಲ್ಲಿದ್ದು, ವೈದ್ಯಕೀಯ ತಪಾಸಣೆಗಾಗಿ ನಗರದ ದಕ್ಷಿಣ ಹೊರವಲಯದ ಜೋಕಾದಲ್ಲಿರುವ ಇಎಸ್‌ಐ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಈ ವೇಳೆ ಪತ್ರಕರ್ತರು ಸುತ್ತುವರಿದಾಗ ಹೇಳಿಕೆ ನೀಡಿದ್ದಾರೆ.

ಮುಖರ್ಜಿ ಅವರ ಬೆಲ್ಗೋರಿಯಾ ಪ್ರದೇಶದ ಫ್ಲಾಟ್‌ನಲ್ಲಿ ದಾಳಿ ನಡೆಸಿದಾಗ ಅಲ್ಲಿ ಸುಮಾರು 28 ಕೋಟಿ ರೂ. ಲೆಕ್ಕಕ್ಕೆ ಸಿಗದ ನಗದು ಮತ್ತು ಭಾರಿ ಪ್ರಮಾಣದ ಚಿನ್ನ ಮತ್ತು ಬೆಳ್ಳಿಯನ್ನು ಬಚ್ಚಿಟ್ಟಿರುವುದು ಕಂಡುಬಂದಿತ್ತು, ಟೋಲಿಗಂಜ್ ಪ್ರದೇಶದಲ್ಲಿ ಮುಖರ್ಜಿ ಅವರಿಗೆ ಸೇರಿದ ಮತ್ತೊಂದು ಫ್ಲಾಟ್‌ನಿಂದ 21 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಕೇಂದ್ರ ತನಿಖಾ ಸಂಸ್ಥೆ ವಶಪಡಿಸಿಕೊಂಡಿತ್ತು. ಇ ಡಿ ಮೂಲಗಳ ಪ್ರಕಾರ ಚಿನ್ನದ ಆಭರಣಗಳ ಮೌಲ್ಯವನ್ನು ಇನ್ನೂ ಕಂಡುಹಿಡಿಯಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next