Advertisement

ತೆಲಂಗಾಣದ ಆರ್‌ಎಸ್‌ಎಸ್‌- ಬಿಜೆಪಿ ನಾಯಕರ ಹತ್ಯೆ ಸಂಚು ವಿಫ‌ಲ

10:58 PM Oct 02, 2022 | Team Udayavani |

ಹೈದರಾಬಾದ್‌/ಅಯೋಧ್ಯೆ: ಹೈದರಾಬಾದ್‌ನ ತೆಲಂಗಾಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಬಿಜೆಪಿ ನಾಯಕರನ್ನು ಹತ್ಯೆ ಮಾಡುವ ಸಂಚನ್ನು ವಿಫ‌ಲಗೊಳಿಸಲಾಗಿದೆ. ಪ್ರಕರಣದ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಹೈದರಾಬಾದ್‌ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಅವರು ಲಷ್ಕರ್‌-ಎ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ್ದಾರೆ. ಅವರನ್ನು ಮೊಹಮದ್‌ ಅಬ್ದುಲ್‌ ಜಾಹೇದ್‌(39) ಹಾಗೂ ಆತನ ಇಬ್ಬರು ಸಹಚರರಾಗಿರುವ ಮಾಜ್‌ ಮತ್ತು ಸಮೀಯುದ್ದೀನ್‌ ಅನ್ನು ಪೊಲೀಸರು ಬಂಧಿಸಿದ್ದಾರೆ.

ಈ ಆರೋಪಿಗಳು ಪಾಕಿಸ್ತಾನದಲ್ಲಿರುವ ನಾಯಕನೊಬ್ಬನ ನಿರ್ದೇಶನದಂತೆ ದಾಳಿ ನಡೆಸಲು ಮುಂದಾಗಿದ್ದರು. ಅದಕ್ಕೆಂದೇ ಭಾನುವಾರದಂದು ನಾಲ್ಕು ಗ್ರೆನೇಡ್‌ಗಳನ್ನು ಸಂಗ್ರಹಿಸಿಕೊಂಡಿದ್ದರು ಎಂದು ಹೇಳಲಾಗಿದೆ.

ಮೊಹಮದ್‌ ಅಬ್ದುಲ್‌ ಜಾಹೇದ್‌ನ ಸಹೋದರ ಮೊಹಮದ್‌ ಅಬ್ದುಲ್‌ ಶಾಹೇದ್‌ ಹರ್ಕತ್‌-ಉಲ್‌-ಜಿಹಾದ್‌-ಎ-ಇಸ್ಲಾಮಿ ಸಂಘಟನೆಯ ಉಗ್ರನಾಗಿದ್ದು, 2005ರಲ್ಲಿ ಬೇಗಂ ಪೇಟ್‌ ಟಾಸ್ಕ್ಫೋರ್ಸ್‌ ಕಚೇರಿಯ ಮೇಲೆ ಆತ್ಮಾಹುತಿ ಬಾಂಬ್‌ ದಾಳಿ ಪ್ರಕರಣದ ಆರೋಪಿಯಾಗಿದ್ದಾನೆ.

ಇದೇ ವೇಳೆ, ಅಯೋಧ್ಯೆಯಲ್ಲಿ ನಿಷೇಧಿ ಪಿಎಫ್ಐನ ಸದಸ್ಯ ಮೊಹಮ್ಮದ್‌ ಜೈದ್‌ ಎಂಬಾತನನ್ನು ಬಂಧಿಸಲಾಗಿದೆ. ಆತ ತಬ್ಲೀ ಜಮಾತ್‌ನ ಸದಸ್ಯನೂ ಆಗಿದ್ದಾನೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next