Advertisement

ಅಂತರ್ ಧರ್ಮದ ಮರ್ಯಾದಾ ಹತ್ಯೆ: ಈದ್ ಶಾಪಿಂಗ್‌ಗೆ ಚಿನ್ನದ ಸರ ಮಾರಿದ್ದ ಹಿಂದೂ ಪತಿ

02:37 PM May 07, 2022 | Team Udayavani |

ಹೈದರಾಬಾದ್ : ಅಂತರ್ ಧರ್ಮೀಯ ವಿವಾಹದ ಕಾರಣಕ್ಕೆ ಪತ್ನಿಯ ಮನೆಯವರಿಂದಲೇ ಹತ್ಯೆಗೀಡಾದ ವ್ಯಕ್ತಿ ಈದ್ ಶಾಪಿಂಗ್ ಗಾಗಿ 25,000 ರೂ.ಗೆ ಚಿನ್ನದ ಸರ ಮಾರಾಟ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

Advertisement

ಬುಧವಾರ ರಾತ್ರಿ ಹೈದರಾಬಾದ್‌ನ ಸರೂರ್‌ನಗರದಲ್ಲಿ ಕಾರು ಶೋರೂಂನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದ ಬಿ ನಾಗರಾಜು ಅವರನ್ನು ಅವರ ಪತ್ನಿ ಅಶ್ರಿನ್ ಅವರ ಸಹೋದರ ಮತ್ತು ಇನ್ನೊಬ್ಬ ಸಂಬಂಧಿಕ ಸಾರ್ವಜನಿಕರ ಎದುರೇ ಬರಬಾರವಾಗಿ ಕೊಚ್ಚಿ ಹತ್ಯೆ ಮಾಡಿದ್ದರು. ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಈದ್ ಶಾಪಿಂಗ್‌ಗಾಗಿ ಪತ್ನಿಯನ್ನು ಚಾರ್ಮಿನಾರ್‌ಗೆ ಕರೆದುಕೊಂಡು ಹೋಗಲು 25,000 ರೂ.ಗೆ ಚಿನ್ನದ ಸರವನ್ನು ಮಾರಾಟ ಮಾಡಿರುವುದಾಗಿ ನಾಗರಾಜು ಹೇಳಿದ್ದು, ಅವರು ತುಂಬಾ ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮದ ವ್ಯಕ್ತಿಯಾಗಿದ್ದರು . ಅವರು ಸಾಮಾನ್ಯವಾಗಿ ಮನೆಗೆ ಹೊರಡುವ ಮೊದಲು ತಮ್ಮ ಕ್ಯಾಶುಯಲ್ ಉಡುಗೆಗಳನ್ನು ಬದಲಾಯಿಸುತ್ತಾರೆ, ಆದರೆ ಬುಧವಾರ ಸಂಜೆ, ಅವರು ತಮ್ಮ ಸಮವಸ್ತ್ರದಲ್ಲಿ ಹೊರಟಿದ್ದರು, ಏಕೆಂದರೆ ಅವರು ತಡವಾಗಿ ಹೋಗಿದ್ದರು ಮತ್ತು ಅವರ ಹೆಂಡತಿಯನ್ನು ಅವರ ಸಹೋದರಿಯ ಮನೆಯಿಂದ ಕರೆದುಕೊಂಡು ಹೋಗಬೇಕಾಗಿತ್ತು ಎಂದು ನಾಗರಾಜು ಕೆಲಸ ಮಾಡುತ್ತಿದ್ದ ಕಾರ್ ಶೋರೂಂನ ಹೆಚ್ ಆರ್ ಮ್ಯಾನೇಜರ್ ಕೆ. ಸತೀಶ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ದೇಶದೆಲ್ಲೆಡೆ ಕೋಮು ಸೂಕ್ಷ್ಮ ಪರಿಸ್ಥಿತಿ ಇರುವ ವೇಳೆಯಲ್ಲೇ ನಡೆದ ಈ ಹತ್ಯೆ ಭಾರಿ ಸುದ್ದಿಯಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next