Advertisement

ಕುದರಿ ಸಾಲವಾಡಗಿ: ಕಡಲೆ ಖರೀದಿ ಕೇಂದ್ರ ಉದ್ಘಾಟನೆ

05:51 PM Apr 18, 2020 | Naveen |

ಹೂವಿನಹಿಪ್ಪರಗಿ: ಬಸವನಬಾಗೇವಾಡಿ ತಾಲೂಕಿನ ಕುದರಿ ಸಾಲವಾಡಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕಡಲೆ ಖರೀದಿ ಕೇಂದ್ರಕ್ಕೆ ಚಾಲನೆ ನೀಡಲಾಯಿತು.

Advertisement

ಈ ವೇಳೆ ಪಿಕೆಪಿಎಸ್‌ ಅಧ್ಯಕ್ಷ ಅನಿಲಗೌಡ ಪಾಟೀಲ ಮಾತನಾಡಿ, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕಡಲೆ ಮಾರಾಟಕ್ಕೆ ಬರುವ ರೈತರು ಸಾಮಾಜಿಕ ಅಂತರ ಕಾಯ್ದುಕೊಂಡು ಸಿಬ್ಬಂದಿಯೊಂದಿಗೆ ಸಹಕರಿಸಿ ಎಂದು ಹೇಳಿದರು.

ಸಚಿನಗೌಡ ಪಾಟೀಲ, ಆನಂದ ತಾಳಿಕೋಟಿ, ಲಕ್ಷ್ಮಣ ರ್ಯಾರೇರಿ, ಅಬ್ದುಲ್‌ರಹೇಮಾನ ಗುಡ್ನಾಳ, ಪರಶುರಾಮ ಬಿದರಕುಂದಿ, ಬೀರಪ್ಪ ಉಂಡಿ, ದುರ್ಗಪ್ಪ ವಡ್ಡರ, ತಿಪ್ಪಣ್ಣ ಕರಕುಂಚಗಿ, ಸಂಗಣ್ಣ ಸಜ್ಜನ, ಎಂ.ವಿ. ಅಣ್ಣಪ್ಪನವರ, ಅನಿಲಕುಮಾರ ದೇಸಾಯಿ, ಮಲ್ಲು ಉಪ್ಪಾರ, ವಿಜಯಕುಮಾರ ಬಿರಾದಾರ, ವಿಜಯಕುಮಾರ ದೇಸಾಯಿ, ಭೀಮನಗೌಡ ಪಾಟೀಲ, ಮಹಾಂತೇಶ ಡೋಣೂರ, ಪರಶುರಾಮ ಕಂಬಾರ, ಹನುಮಂತ್ರಾಯ ದೇಸಾಯಿ, ಚಿದಾನಂದ ಜೀರ, ಬಸವರಾಜ ನಾಯ್ಕೋಡಿ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next