Advertisement

ಶೀಲ ಶಂಕಿಸಿ ಪತ್ನಿಯ ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ ವಿಕೃತ 

12:21 PM Dec 19, 2017 | Team Udayavani |

ದಾವಣಗೆರೆ: ಶೀಲ ಶಂಕಿಸಿ ಪತ್ನಿಯ ಗುಪ್ತಾಂಗಕ್ಕೆ ಪತಿಯೊಬ್ಬ ಬೆಂಕಿ ಹಚ್ಚಿದ ಹೇಯ ಘಟನೆ ಹರಪ್ಪನಹಳ್ಳಿಯ ನಂದಿ  ಬೇವೂರು ಗ್ರಾಮದಲ್ಲಿ ನಡೆದಿದೆ.

Advertisement

ತಿಪ್ಪನಾಯ್ಕ ಎಂಬಾತ ಕುಡಿದು ಬಂದು ಪತ್ನಿ ಲಕ್ಷ್ಮೀ ಬಾಯಿಗೆ ಥಳಿಸಿ ಗುಪ್ತಾಂಗಕ್ಕೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಇದೀಗ ಗಂಭೀರ ಗಾಯಗೊಂಡಿರುವ ಲಕ್ಷ್ಮೀ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. 

ತಿಪ್ಪನಾಯ್ಕ ಮತ್ತು ಲಕ್ಷ್ಮೀ ಅವರ ವಿವಾಹ 6 ವರ್ಷಗಳ ಹಿಂದೆ ನಡೆದಿದ್ದು, ಓರ್ವ ಮಗ ಇದ್ದಾನೆ ಎಂದು ತಿಳಿದು ಬಂದಿದೆ. 

ಲಕ್ಷ್ಮೀ ಕೂಲಿ ಮಾಡಿಕೊಂಡು ಬದುಕುತ್ತಿದ್ದು,ನಿತ್ಯವೂ ತಿಪ್ಪನಾಯ್ಕ ಹಿಂಸೆ ನೀಡುತ್ತಿದ್ದ. ಈ ಹಿಂದೆ 2 ಬಾರಿ  ಬೆಂಕಿ ಹಚ್ಚಿ ಕೊಲ್ಲಲೂ ಯತ್ನಿಸಿದ್ದು,ವಿಚ್ಛೇಧನ ಪಡೆಯಲು ಅರ್ಜಿ ಸಲ್ಲಿಸಿದ್ದರು ಎಂದು ವರದಿಯಾಗಿದೆ. 

ಹರಪ್ಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next