Advertisement

ಹುಣಸೂರು: ಸಾಲ ತೀರಿಸಲಾಗದೆ ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ

09:08 AM Aug 03, 2022 | Team Udayavani |

ಹುಣಸೂರು: ಸಾಕಷ್ಟು ಸಾಲ ಮಾಡಿಕೊಂಡಿದ್ದ ರೈತರೊಬ್ಬರು ಕ್ರಿಮಿನಾಶಕದ ಕಾಳು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ರಾಮೇನಹಳ್ಳಿಯಲ್ಲಿ ಮಂಗಳವಾರ ನಡೆದಿದೆ.

Advertisement

ತಾಲೂಕಿನ ಹನಗೋಡು ಹೋಬಳಿಯ ರಾಮೇನ ಹಳ್ಳಿಯ ಈಶ್ವರ್(58) ಸಾವನ್ನಪ್ಪಿದವರು.

ಘಟನೆ ವಿವರ: ರೈತ ಈಶ್ವರ್ ರವರಿಗೆ ಒಟ್ಟು 2.5 ಎಕರೆ ಜಮೀನಿದ್ದು, ಕೃಷಿಗಾಗಿ ಹುಣಸೂರಿನ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 3 ಲಕ್ಷ ಹಾಗೂ ಕೋಷಮಟ್ಟಂ ಫೈನಾನ್ಸ್ ನಲ್ಲಿ 200 ಗ್ರಾಂ ಒಡವೆಯನ್ನಿಟ್ಟು 5 ಲಕ್ಷ ರೂ. ಸಾಲ ಪಡೆದಿದ್ದರಲ್ಲದೆ ಸುಮಾರು ಎರಡು ಲಕ್ಷ ರೂ. ನಷ್ಟು ಕೈ ಸಾಲ ಮಾಡಿಕೊಂಡಿದ್ದರು. ಕೃಷಿ ಕೈ ಕೊಟ್ಟಿದ್ದು, ಸಾಲ ತೀರಿಸಲಾಗದೆ ಬವಣೆ ಪಡುತ್ತಿದ್ದರು. ಇದರಿಂದ ಹತಾಶೆಗೊಳಗಾದ ಇವರು ಆಗಸ್ಟ್ 1 ರಂದು ಮನೆಯಲ್ಲಿ ಯಾರೂ ಇಲ್ಲದಿದ್ದ ವೇಳೆ ವ್ಯವಸಾಯಕ್ಕೆಂದು ತಂದಿಟ್ಟಿದ್ದ ಕ್ರಿಮಿನಾಶಕ ಕಾಳು ಮಾತ್ರೆಯನ್ನು ಸೇವಿಸಿ ಅಸ್ಪಸ್ಥರಾಗಿದ್ದು, ಬಳಿಕ ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಈ ಸಂಬಂದ ಮೃತರ ಬಾವ ಮೈದುನ ಉಮೇಶ್ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಮೃತರು ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next