Advertisement

ಹುಣಸೂರು: ಹುಲಿ ಪತ್ತೆಗೆ ಬಲರಾಮ, ಅಶ್ವತ್ಥಾಮನ ನೆರವು

12:36 PM Sep 28, 2022 | Team Udayavani |

ಹುಣಸೂರು: ತಾರಕ ಗ್ರಾಮದ ಬಳಿ ಜಾನುವಾರುಗಳನ್ನು ಬಲಿ ಪಡೆಯುತ್ತಿರುವ ಹುಲಿಯ ಪತ್ತೆಗಾಗಿ ನಾಗರಹೊಳೆ ಉದ್ಯಾನವನದ ಸಾಕಾನೆಗಳ ನೆರವು ಪಡೆಯಲಾಗಿದೆ.

Advertisement

ತಾರಕ ಗ್ರಾಮದ ಬಳಿ ಈಗಾಗಲೇ ಹುಲಿ, ಎರಡು ‌ ಮರಿಗಳೊಂದಿಗೆ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಮೂರು ಹಸುಗಳನ್ನು ಕೊಂದಿತ್ತು. ಸಾಕು ಪ್ರಾಣಿಗಳಿಗೆ ಕಂಟಕವಾಗಿರುವ ಹುಲಿ ಹಾಗೂ ಮರಿಗಳು ಕಾಣಿಸಿಕೊಂಡಿದಕ್ಕೆ ಜನರು ಭಯಭೀತರಾಗಿದ್ದು, ಹುಲಿಯ ಇರುವಿಕೆ ಬಗ್ಗೆ ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದರು.

ಸೆ. 27 ರಂದು ನಾಗರಹೊಳೆ ಉದ್ಯಾನವನದ ಮತ್ತಿಗೋಡು ವಲಯದ ಕಂಠಾಪುರ ಸಾಕಾನೆ ಶಿಬಿರದ ಪರಾಕ್ರಮಿ ಆನೆ ಅಭಿಮನ್ಯು ಮೈಸೂರು ದಸರಾ ಕಾರ್ಯಕ್ರಮದಲ್ಲಿ ಅಂಬಾರಿ ಹೊರಲು ತೆರಳಿದ್ದರಿಂದ ಬಲಶಾಲಿ ಬಲರಾಮ ಹಾಗೂ ಅದರ ಜೊತೆಗೆ ಅಶ್ವತ್ಥಾಮ ಎಂಬ ಸಾಕಾನೆಗಳೊಂದಿಗೆ ಅಂತರ ಸಂತೆ ಆರ್.ಎಫ್.ಓ ಸಿದ್ದರಾಜು ನೇತೃತ್ವದಲ್ಲಿ ಡಿ.ಆರ್.ಎಫ್.ಓ.ಗಳಾದ ಅಂತೋಣಿ, ಮಂಜುನಾಥಾರಾಧ್ಯ, ಚಂದನ್, ಮಾವುತರು ಹಾಗೂ ಕವಾಡಿಗಳು, ಎಸ್.ಟಿ.ಪಿ.ಎಫ್. ಹಾಗೂ ಅರಣ್ಯ ಸಿಬ್ಬಂದಿಗಳು ಹುಲಿ ಮತ್ತು ಮರಿಗಳಿಗಾಗಿ ಹುಡುಕಾಟ ನಡೆಸಿದ್ದು, ರಾತ್ರಿವರೆಗೂ ಹುಲಿ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next