Advertisement

ಹುಣಸೂರು: ಮಹಾನವಮಿ ಊಟಕ್ಕೆ ತೆರಳಿದ್ದಾತ ಅಪಘಾತದಲ್ಲಿ ಸಾವು

09:49 PM Sep 23, 2022 | Team Udayavani |

ಹುಣಸೂರು: ಅಪರಿಚಿತ ಜೀಪ್ ಢಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ್ದು, ಹಿಂಬದಿಯ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ಹೆದ್ದಾರಿಯ ಎಪಿಎಂಸಿ ಎದುರಿನಲ್ಲಿ ಗುರುವಾರ ರಾತ್ರಿ ನಡೆದಿದೆ.

Advertisement

ಹುಣಸೂರು ತಾಲೂಕಿನ ಬಿ.ಆರ್.ಕಾವಲ್ ಗ್ರಾಮದ ಸ್ವಾಮಿಗೌಡರ ಪುತ್ರ ಮೋಹನ್(35) ಸಾವನನ್ನಪ್ಪಿದ್ದರೆ, ಹಿಂಬದಿಯ ಸವಾರ ಹರೀಶ್ ತೀವ್ರಗಾಯಗೊಂಡು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೋಹನ್ ಗೆ ಒಂದೂವರೆ ವರ್ಷದ ಮಗುವಿದೆ.

ಘಟನೆ ವಿವರ :ಮೋಹನ್ ಬೈಕಿನಲ್ಲಿ ಇಬ್ಬರೂ ಕಾರ್ಯನಿಮಿತ್ತ ಹುಣಸೂರಿಗೆ ಬಂದು ವಾಪಸ್ ಮರಳುತ್ತಿದ್ದ ವೇಳೆ ಹೆದ್ದಾರಿಯಲ್ಲಿ ಮೈಸೂರು ಕಡೆಯಿಂದ ಪಿರಿಯಾಪಟ್ಟಣಕ್ಕೆ ತೆರಳುತ್ತಿದ್ದ ಜೀಪ್ ಹಿಂಬದಿಯಿಂದ ಢಿಕ್ಕಿ ಹೊಡೆದ ರಭಸಕ್ಕೆ ತಲೆ,ಕೈಕಾಲುಗಳಿಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿಯ ಸವಾರ ಹರೀಶ್‌ಗೂ ತೀವ್ರ ಪೆಟ್ಟು ಬಿದ್ದಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೋಹನ್ ಹಾಗೂ ಹರೀಶ್ ರವರು ನಗರಕ್ಕೆ ಸಮೀಪದ ಮೂಕನಹಳ್ಳಿಯ ಸಂಬಂಧಿಕರ ಮನೆಗೆ ಮಹಾನವಮಿಯ ಅಂಗವಾಗಿ ಬಾಡೂಟಕ್ಕೆ ತೆರಳಿದ್ದರು. ಊಟ ಮಾಡಿಕೊಂಡು ವಾಪಾಸಾಗುವ ವೇಳೆ ನಡೆದ ಅಪಘಾತ ನಡೆದಿದೆ.

ಮೋಹನ್ ಪತ್ನಿ ಕಳೆದ ಮೂರು ತಿಂಗಳ ಹಿಂದಷ್ಟೆ ಸಾವನ್ನಪ್ಪಿದ್ದರು, ತಂದೆ-ತಾಯಿಯನ್ನು ಕಳೆದುಕೊಂಡ ಒಂದುವರೆ ವರ್ಷದ ಮಗು ಇದೀಗ ಅನಾಥವಾಗಿದೆ.
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next