Advertisement

Hunsur: ಮಲಗಿದ್ದಲ್ಲೇ ಮೃತಪಟ್ಟ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್

06:53 PM Jul 02, 2024 | Team Udayavani |

ಹುಣಸೂರು: ಬಸ್ ಕಂಡಕ್ಟರ್ ವೊಬ್ಬರು ಮನೆಯಲ್ಲಿ ಮಲಗಿದ್ದ ವೇಳೆಯೇ ಮೃತಪಟ್ಟಿರುವ ಘಟನೆ ತಾಲೂಕಿನ ಕಸಬಾ ಹೋಬಳಿಯ ನಂಜಾಪುರದಲ್ಲಿ ಜು.2ರ ಮಂಗಳವಾರ ನಡೆದಿದೆ.

Advertisement

ಗ್ರಾಮದ ಚೆಲುವಶೆಟ್ಟಿ-ಜಯಮ್ಮರ ಪುತ್ರ, ಹುಣಸೂರು ಡಿಪೋ ಕಂಡಕ್ಟರ್ ಸಿ.ಪ್ರಸನ್ನ(38) ಮೃತಪಟ್ಟವರು. ಅವಿವಾಹಿತರಾಗಿದ್ದ ಇವರು ತಂದೆ, ತಾಯಿ, ಸಹೋದರಿ ಹಾಗೂ ಸಹೋದರನನ್ನು ಅಗಲಿದ್ದಾರೆ.

ಮನೆಯಲ್ಲಿ ಮಲಗಿದ್ದ ಪ್ರಸನ್ನ ಎಷ್ಟು ಹೊತ್ತಾದರೂ ಏಳದಿದ್ದಾಗ  ಮನೆಯವರು ಎಬ್ಬಿಸಲು ಹೋದ ವೇಳೆ ಸಾವನ್ನಪ್ಪಿರುವುದು ತಿಳಿದು ಬಂತು.

ಮೃತರ ಮನೆಗೆ ಸಾರಿಗೆ ಸಂಸ್ಥೆಯ ಸಹಾಯಕ ಸಂಚಾರ ನಿರೀಕ್ಷಕ ಗಂಗಣ್ಣ, ಲೆಕ್ಕಪತ್ರ ಮೇಲ್ವಿಚಾರಕ ಮಂಜುನಾಥ್, ಸಿಬ್ಬಂದಿ ಮೇಲ್ವಿಚಾರಕ ಬಾಲಸುಬ್ರಮಣ್ಯಂ ಹಾಗೂ ಸಹೊದ್ಯೋಗಿಗಳು ಭೇಟಿ ನೀಡಿ ಸಂತಾಪ ಸೂಚಿಸಿದರಲ್ಲದೆ ಸಂಸ್ಥೆಯ ಪರವಾಗಿ 15 ಸಾವಿರ ರೂ.ಗಳನ್ನು ಅಂತ್ಯಸಂಸ್ಕಾರಕ್ಕಾಗಿ ನೀಡಿದರು. 

ಸಂಜೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next