Advertisement

ಹುಣಸೂರಲ್ಲಿ ಮಳೆಗೆ ಮೊದಲ ಬಲಿ: ಮನೆಗೋಡೆ ಕುಸಿದು ಬಿದ್ದು ವೃದ್ದೆ ಸಾವು

02:40 PM Aug 02, 2022 | Team Udayavani |

ಹುಣಸೂರು:  ಕಳೆದ ಎರಡು ದಿನದಿಂದ ಸುರಿಯುತ್ತಿರುವ ಗುಡುಗು, ಬಿರುಗಾಳಿ ಸಹಿತ ಮಳೆಗೆ ಮನೆ ಗೋಡೆ ಕುಸಿದು ಬಿದ್ದು ವೃದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಕೆಂಚನಕೆರೆ ಹೊಸಕೋಟೆಯಲ್ಲಿ ಸೋಮವಾರ ಮದ್ಯರಾತ್ರಿ ನಡೆದಿದೆ.

Advertisement

ತಾಲೂಕಿನ ಕಸಬಾ ಹೋಬಳಿಯ ಕೆಂಚನಕೆರೆ ಹೊಸಕೋಟೆ ಗ್ರಾಮದ ಲೇ.ಗುರುಮೂರ್ತಿಯವರ ಪತ್ನಿ ಶಾಂತಮ್ಮ(65) ಮೃತಪಟ್ಟವರು.

ರಾತ್ರಿ ಇಡೀ ಬಿದ್ದ ಮಳೆಗೆ ಕಸಬಾ ಹೋಬಳಿಯ ಕೆಂಚನಕೆರೆ ಹೊಸಕೋಟೆಯ ಶಾಂತಮ್ಮರ ಮನೆಗೋಡೆ ಕುಸಿದು ಬಿದ್ದಿದೆ. ಮಲಗಿದ್ದ ಶಾಂತಮ್ಮರವರ ಮೇಲೆ ಗೋಡೆ ಬಿದ್ದು ಅವರು, ಸಾವನ್ನಪ್ಪಿದ್ದಾರೆ.

ವಿಷಯತಿಳಿಯುತ್ತಿದ್ದಂತೆ ಶಾಸಕ ಎಚ್.ಪಿ.ಮಂಜುನಾಥ್, ತಹಸೀಲ್ದಾರ್ ಡಾ.ಅಶೋಕ್ . ಆರ್, ನಂದೀಶ್, ಶಿವಕುಮಾರ್ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next