Advertisement

Hunsur: ಅಪಘಾತದಲ್ಲಿ ಗಾಯಗೊಂಡಿದ್ದ ಉದ್ಯಮಿ ಮೃತ್ಯು

08:28 PM Aug 19, 2024 | Team Udayavani |

ಹುಣಸೂರು: ಕಾರು-ಬೈಕ್ ನಡುವಿನ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಹುಣಸೂರು ನಗರದ ಕಲ್ಕುಣಿಕೆ ಹೌಸಿಂಗ್ ಬೋರ್ಡ್ ನಿವಾಸಿ ಉದ್ಯಮಿ ಮೋಹನ್‌ದಾಸ್(53) ನಿಧನಹೊಂದಿದ್ದಾರೆ.

Advertisement

ಮೋಹನ್‌ದಾಸ್ ಅವರು ಪತ್ನಿ ಸದಾಶಿವನ ಕೊಪ್ಪಲಿನ ಪ್ರಭಾರ ಮುಖ್ಯ ಶಿಕ್ಷಕಿ ಅನಿತಾ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಎಂಸ್ಯಾಡ್ ಮತ್ತು ಸೈಜುಕಲ್ಲು ವ್ಯಾಪಾರಿಯಾಗಿರುವ ಮೋಹನ್‌ದಾಸ್ ಭಾನುವಾರ ಬೆಳಗ್ಗೆ ಹೌಸಿಂಗ್ ಬೋರ್ಡ್ ನ ಮನೆಯಿಂದ ನಗರದ ಕಡೆಗೆ ಬೈಕಿನಲ್ಲಿ ಬರುತ್ತಿದ್ದ ವೇಳೆ ಹೆದ್ದಾರಿಯಲ್ಲಿ ಮಡಿಕೇರಿ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ತಲೆ, ಕೈ,ಕಾಲುಗಳಿಗೆ ತೀವ್ರಗಾಯವಾಗಿತ್ತು. ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ(ಆ 19) ಮೃತಪಟ್ಟಿದ್ದಾರೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next