Advertisement

ಹುಣಸೂರು: ನಿಯಂತ್ರಣ ತಪ್ಪಿ ಬೈಕ್ ಬಿದ್ದು ಸವಾರ ಸಾವು

02:36 PM Jul 24, 2022 | Team Udayavani |

ಹುಣಸೂರು: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬೈಕ್‌ ಬಿದ್ದ ಪರಿಣಾಮ  ಸವಾರ ಸಾವನ್ನಪ್ಪಿರುವ ಘಟನೆ  ಹೆದ್ದಾರಿಯ ಬನ್ನಿಕುಪ್ಪೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.

Advertisement

ಹುಣಸೂರು ತಾಲೂಕಿನ ನರಸಿಂಹಸ್ವಾಮಿ ತಿಟ್ಟು ಬಡಾವಣೆಯ ನಿವಾಸಿ ಚೇತನ್ ರಾಜ್ (24) ಮೃತ ದುರ್ದೈವಿ.

ಮೈಸೂರಿನಲ್ಲಿ ಅಂಗಡಿ ಇಟ್ಟು ಕೊಂಡಿರುವ ಚೇತನ್ ರಾಜ್ ತಮ್ಮ ಬೈಕಿನಲ್ಲಿ ರಾತ್ರಿ ಮನೆಗೆ ಬರುತ್ತಿದ್ದ ವೇಳೆ  ಮೈಸೂರು- ಬಂಟ್ವಾಳ ಹೆದ್ದಾರಿಯ ಹುಣಸೂರು ತಾಲೂಕಿನ ಬನ್ನಿಕುಪ್ಪೆ ಬಳಿ ಬೈಕ್ ನಿಯಂತ್ರಣ ತಪ್ಪಿ ಬಿದ್ದು‌ ಸಾವನ್ನಪ್ಪಿರ ಬಹುದೆಂದು ಶಂಕಿಸಲಾಗಿದೆ.

ಭಾನುವಾರ ಬೆಳಗ್ಗೆ ದಾರಿ ಹೋಕರು ನೀಡಿದ ಮಾಹಿತಿ ಮೇರೆಗೆ ಬಿಳಿಕೆರೆ ಠಾಣಾ ಇನ್ಸ್ ಪೆಕ್ಟರ್ ಚಿಕ್ಕೆಸ್ವಾಮಿ ಹಾಗೂ ಸಿಬ್ಬಂದಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಒಳ ಉಡುಪು ಆಯ್ತು; ರೀಟ್ ಅಭ್ಯರ್ಥಿಗಳಿಗೆ ದುಪಟ್ಟ ತೆಗೆಯಲು ಆದೇಶ

Advertisement

ಚೇತನ್ ರಾಜ್ ನಿಯಂತ್ರಣತಪ್ಪಿ ಬಿದ್ದು ಸಾವನ್ನಪ್ಪಿದ್ದಾರೋ ಅಥವಾ ಹೆದ್ದಾರಿಯಲ್ಲಿ ಯಾವುದಾದರೂ ವಾಹನ ಢಿಕ್ಕಿ ಹೊಡೆದಿದೆಯೋ ಎಂಬುದರ ಬಗ್ಗೆ ಪೊಲೀಸರು ತನಿಖೆ  ನಡೆಸುತ್ತಿದ್ದು, ಶವವನ್ನು ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next