Advertisement

ಹುಣಸೂರು: ಬೋನಿನಲ್ಲಿ ಸೆರೆಯಾದ ಚಾಲಾಕಿ ಚಿರತೆ

10:30 PM Oct 07, 2022 | Team Udayavani |

ಹುಣಸೂರು: ಸಾಕುಪ್ರಾಣಿಗಳನ್ನು ಬಲಿಪಡೆದು ಜಾಗ ಖಾಲಿಮಾಡುತ್ತಿದ್ದ ಚಿರತೆಯು ಕೊನೆಗೂ ಬೋನಿನಲ್ಲಿ ಬಂಧಿಯಾಗಿರುವ ಘಟನೆ ತಾಲೂಕಿನ ಬಲ್ಲೇನಹಳ್ಳಿಯಲ್ಲಿ ನಡೆದಿದೆ.

Advertisement

ತಾಲೂಕಿನ ಕಸಬಾ ಹೋಬಳಿಯ ಬಲ್ಲೇನಹಳ್ಳಿ, ಕಾಳೇನಹಳ್ಳಿ, ಹೊಸವಾರಂಚಿ, ಹಳೇವಾರಂಚಿ ಸುತ್ತಮುತ್ತಲ ಗ್ರಾಮಗಳಲ್ಲಿ ಆಗಾಗ್ಗೆ ಬೀದಿನಾಯಿ, ಆಡು,ಮೇಕೆ ಮತ್ತಿತರ ಸಾಕುಪ್ರಾಣಿಗಳನ್ನು ಭೇಟೆಯಾಡಿ ಜಾಗ ಖಾಲಿ ಮಾಡುತ್ತಿತ್ತು. ಎರಡು ದಿನಗಳ ಹಿಂದೆಯಷ್ಟೆ ಮೇಕೆಯನ್ನು ಬಲಿ ಪಡೆದಿತ್ತು. ಈ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ ಮೇರೆಗೆ ಬೋನ್ ಇರಿಸಲಾಗಿತ್ತು.

ಶುಕ್ರವಾರ ಬೆಳಗ್ಗೆ ಸುಮಾರು ಮೂರು ವರ್ಷದ ಹೆಣ್ಣು ಚಿರತೆಯೇ ಬೋನಿನಲ್ಲಿ ಬಂಧಿಯಾಗಿದ್ದು, ಅರಣ್ಯ ಇಲಾಖೆಯ ಪ್ರಾದೇಶಿಕ ವಿಭಾಗದ ಡಿ.ಆರ್.ಎಫ್.ಓ.ದೇವಯ್ಯ, ಪ್ಯಾರೆಜಾಜ್, ರವಿಕುಮಾರ್ ಹಾಗೂ ಸಿಬ್ಬಂದಿಗಳು ಬಂಧಿಯಾಗಿದ್ದ ಚಿರತೆಯನ್ನು ನಾಗರಹೊಳೆ ಉದ್ಯಾನದ ಅಂತರಸಂತೆ ಪ್ರದೇಶದಲ್ಲಿ ಬಂಧಮುಕ್ತಗೊಳಿಸಿದ್ದಾರೆ, ಹಳೇವಾರಂಚಿ ಸುತ್ತಮುತ್ತಲಿನಲ್ಲಿ ಮತ್ತಷ್ಟು ಚಿರತೆಗಳಿರುವ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದು, ಮತ್ತೆ ಬೋನ್ ಇರಿಸಿ ಸೆರೆಗೆ ಕ್ರಮವಹಿಸಲಾಗಿದೆ ಎಂದು ಆರ್ ಎಫ್ಓ ನಂದಕುಮಾರ್ ಉದಯವಾಣಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next