Advertisement

ಹುಣಸಗಿ: ಕಾಲುವೆ ಸೇತುವೆಗೆ ಕಾರು ಢಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವು

07:50 PM Dec 30, 2022 | Team Udayavani |

ಹುಣಸಗಿ: ಎಡದಂಡೆ ಮುಖ್ಯಕಾಲುವೆಯ ಸೇತುವೆಗೆ ಕಾರು ಢಿಕ್ಕಿಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ರಾಜನಕೋಳೂರು ಗ್ರಾಮದ ಹೊರವಲಯದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.ಚಾಲಕ ಮಲ್ಲಿಕಾರ್ಜುನ ಮಡಿವಾಳರ(35) ಮತ್ತು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪರಸಪ್ಪ ಚಲವಾದಿ(32) ಮೃತ ದುರ್ದೈವಿಗಳು.

Advertisement

ಬಲಶೆಟ್ಟಿಹಾಳ ಗ್ರಾಮದಿಂದ ನಾರಾಯಣಪುರ ಗ್ರಾಮದ ಕಡೆಗೆ ಶುಕ್ರವಾರ ಬೆಳಗ್ಗೆ ಕಾರಿನಲ್ಲಿ ಚಲಿಸುತ್ತಿದಾಗ ಚಾಲಕನ ನಿಯಂತ್ರಣ ತಪ್ಪಿ ಎಡದಂಡೆ ಕಾಲುವೆಯ ಸೇತುವೆ ಗೋಡೆಗೆ ವೇಗವಾಗಿ ಢಿಕ್ಕಿ ಹೊಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಕಾಲುವೆಯ ಸೇತುವೆ ಗೋಡೆಗೆ ರಭಸವಾಗಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಸ್ಥಳಕ್ಕೆ ಡಿವೈಎಸ್‌ಪಿ ಟಿ.ಮಂಜುನಾಥ ಮತ್ತು ಸಿಪಿಐ ಎಂ.ಬಿ.ಚಿಕ್ಕಣನವರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂದರ್ಭ ಪೊಲೀಸ್ ಸಿಬಂದಿಗಳಾದ ಬಸನಗೌಡ ಪಾಟೀಲ, ಬಸನಗೌಡ ಮತ್ತು ಪ್ರಭುಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next