Advertisement

ಬರವಣಿಗೆಯೇ ಬಂಡವಾಳ

03:01 PM Sep 12, 2018 | |

ಭಾಷೆ ಗೊತ್ತಿದೆ, ತಕ್ಕ ಮಟ್ಟಿನ ಬರವಣಿಗೆ ಶೈಲಿಯೂ ಚೆನ್ನಾಗಿದೆ ಎಂದಾದರೆ ಬದುಕು ರೂಪಿಸಲು ನೂರಾರು ದಾರಿಗಳು ಸಿಕ್ಕಿದಂತೆಯೇ ಸರಿ. ಭಾಷೆ ಮತ್ತು ಉತ್ತಮ ಬರವಣಿಗೆಯನ್ನು ರೂಢಿಸಿಕೊಂಡರೆ ಒಂದೊಳ್ಳೆ ಭವಿಷ್ಯವನ್ನು ಖಂಡಿತ ರೂಪಿಸಿಕೊಳ್ಳಬಹುದು. ತೂಕದ ಶಬ್ದಗಳಿಂದ ಮತ್ತಷ್ಟು ಬರವಣಿಗೆಯನ್ನು ಉನ್ನತ ಗುಣಮಟ್ಟಕ್ಕೆ ಕೊಂಡೊಯ್ಯವುದು ಒಂದು ಕಲೆ. ಏಕೆಂದರೆ ಒಬ್ಬ ಉತ್ತಮ ಬರಹಗಾರನಾಗಬೇಕಾದರೆ ಚೆನ್ನಾಗಿ ಓದಿಕೊಂಡಿರಬೇಕು. ಹಾಗಾದರೆ ಮಾತ್ರ ಒಳ್ಳೆಯ ಪದಗಳನ್ನು ಬರವಣಿಗೆಯಲ್ಲಿ ತರಲು ಸಾಧ್ಯ.

Advertisement

ಕಂಟೆಂಟ್‌ ರೈಟಿಂಗ್‌, ಹವ್ಯಾಸಿ ಪತ್ರಕರ್ತ, ಅನುವಾದ, ಬ್ಲಾಗ್‌ ರೈಟಿಂಗ್‌ ಹೀಗೆ ಬರವಣಿಗೆಯ ಹವ್ಯಾಸವಿದ್ದ ವರು ಹಣದೊಂದಿಗೆ ಉತ್ತಮ ಹೆಸರನ್ನೂ ಗಳಿಸಲು ಸಾಧ್ಯವಿದೆ. ಈ ಎಲ್ಲದಕ್ಕೂ ಮುಖ್ಯವಾಗಿ ಅವಶ್ಯಕವಾಗಿರುವುದು ಸ್ಪಷ್ಟ ಭಾಷಾ ಜ್ಞಾನ ಹಾಗೂ ಸೃಜನಶೀಲ ಬರವಣಿಗೆ. ಕಠಿನ ಶಬ್ದಗಳನ್ನು ಸರಳವಾಗಿ ಅರ್ಥೈಸುವ ರೀತಿ ತಿಳಿದಿದ್ದರೆ ಸಾಕು.

ಕಂಟೆಂಟ್‌ ರೈಟಿಂಗ್‌ನಲ್ಲಿ ಒಂದು ವಿಷಯ ಆಧಾರಿತವಾಗಿ ಬರೆಯುವುದು ಆದರೆ ಅದು ಅತ್ಯಂತ ಸರಳವಾಗಿ ಸುಲಭವಾಗಿ ಸೀಮಿತ ಪದಗಳ ಮಿತಿಯೊಳಗೆ ಓದುಗನಿಗೆ ಅರ್ಥವಾಗುವಂತಿರಬೇಕು. ಇದು ಕಮರ್ಷಿಯಲ್‌ ಸೆಕ್ಟರ್‌ನಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಏಕೆಂದರೆ ಮಾರುಕಟ್ಟೆಗೆ ಯಾವುದೇ ಹೊಸ ವಸ್ತುಗಳು ಬಂದರೆ ಅದರ ಸವಿವರವನ್ನು ನೀಡುವುದು ಕೂಡ ಈ ಕಂಟೆಂಟ್‌ ರೈಟರ್‌. ಹಾಗಾಗಿ ಇದು ಬಿಸಿನೆಸ್‌ ಫೀಲ್ಡ್‌ನ ಬಹು ಮುಖ್ಯ ಅಂಗವಾಗಿದೆ.

ಬರವಣಿಗೆ ಹವ್ಯಾಸದ ಜತೆಗೆ ಸ್ವಲ್ಪ ಸಾಮಾನ್ಯ ಜ್ಞಾನ ಹಾಗೂ ಕ್ರಿಯೆಟಿವಿಟಿ ಹಾಗೂ ಓದುವ ಹವ್ಯಾಸವನ್ನೊಳಗೊಂಡಿದ್ದರೆ ಹವ್ಯಾಸಿ ಪತ್ರಕರ್ತನಾಗಲು ಸಾಧ್ಯ. ಯಾವುದಾದರೊಂದು ವಿಷಯದ ಬಗ್ಗೆ ತಾರ್ಕಿಕವಾಗಿ, ವಿಶ್ಲೇಷಣಾತ್ಮಕವಾಗಿ ಬರೆಯಬಹುದು. ಹೀಗೆ ಗುರುತಿಸಿಕೊಂಡರೆ ಮ್ಯಾಗಜಿನ್‌, ದಿನಪತ್ರಿಕೆ, ವೆಬ್‌ಸೈಟ್‌ಗಳು ಅವಕಾಶವನ್ನು ಕೊಡುತ್ತವೆ ಮಾತ್ರವಲ್ಲ ಉತ್ತಮ ಸಂಭಾವನೆಯನ್ನೂ ನೀಡುತ್ತವೆ.

ಅನುವಾದ ಅಥವಾ ತರ್ಜುಮೆ ಎನ್ನುವುದು ಸ್ವಂತ ಶ್ರಮದಿಂದ ಮಾತ್ರ ಸಾಧ್ಯ. ಇಂಗ್ಲಿಷ್‌ ಅಥವಾ ಇನ್ಯಾವುದೋ ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡುವುದು ಒಂದು ಕಲೆ. ಇಂತವುಗಳಿಗೆ ಹೆಚ್ಚು ಬೇಡಿಕೆ ಇದೆ. ಕಾದಂಬರಿ, ಕಥೆ ಪುಸ್ತಕಗಳನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಿಸುವುದು ದೊಡ್ಡ ಕಾರ್ಯ. ಅಂತಹವರು ಕೆಲವೇ ಕೆಲವು ಮಂದಿ ಇರುವುದು. 

Advertisement

ತರಬೇತಿಗಿಂತ ಆಸಕ್ತಿಯೇ ಮುಖ್ಯ
ಈ ಬರವಣಿಗೆಯನ್ನು ಉತ್ತಮ ತರಗತಿ, ಶಿಕ್ಷಕರಿಂದ ಕಲಿಯುವುದಕ್ಕಿಂತ ಆಸಕ್ತಿಯಿಂದ ಬರೆಯವುದು ಮುಖ್ಯ. ಸೃಜನಾತ್ಮಕವಾಗಿ, ವಿಭಿನ್ನವಾಗಿ ಅಕ್ಷರಕ್ಕೆ ಜೀವ ಕೊಡುವುದು ಬರವಣಿಗೆಯ ಶೈಲಿ. ಇದರ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಬರಹಗಾರರಾಗಲು ಸಾಧ್ಯ. 

ವಿಷಯ ಜ್ಞಾನ
ವಿಷಯಗಳು ಸಾವಿರಾರು ಹಾಗಾಗಿ ನಮಗಿಷ್ಟ ಬಂದ ವಿಷಯಗಳ ಕುರಿತು ಬರೆಯಬಹುದು. ವಿಜ್ಞಾನ, ತಂತ್ರಜ್ಞಾನ, ಭಾಷೆ, ರಾಜಕೀಯ, ಸಾಹಿತ್ಯ ಹೀಗೆ ಎಲ್ಲದರೆಡೆ ಗಮನ ಹರಿಸಬಹುದು. ಇದು ನಮ್ಮ ಕೆರಿಯರ್‌ ಅನ್ನೂ ಬದಲಿಸಬಹುದು. ಆದರೆ ಇದಕ್ಕೆ ಓದು ಮಾತ್ರ ಬಹುಮುಖ್ಯ. 

ಭರತ್‌ರಾಜ್‌ ಕರ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next