Advertisement

Hunasuru: ಆಕಸ್ಮಿಕ ಬೆಂಕಿಗೆ ಬಾಳೆ, ತೆಂಗು, ಬಿದಿರು ಸುಟ್ಟು ಭಸ್ಮ… ಲಕ್ಷಾಂತರರೂ ನಷ್ಟ

07:24 PM Mar 02, 2024 | Team Udayavani |

ಹುಣಸೂರು; ತಾಲೂಕಿನ ಬಿಳಿಕೆರೆ ಹೋಬಳಿಯ ಎಮ್ಮೆಕೊಪ್ಪಲು ಗ್ರಾಮದಲ್ಲಿ ಆಕಸ್ಮಿಕ ಬೆಂಕಿಗೆ ಬಾಳೆ ತೋಟ, ತೆಂಗಿನ ಮರಗಳು ಬೆಂಕಿಗಾಹುತಿಯಾಗಿದ್ದು, ಲಕ್ಷಾಂತರ ರೂ ನಷ್ಟ ಸಂಭವಿಸಿದೆ.

Advertisement

ತಾಲೂಕಿನ ಬಿಳಿಕೆರೆ ಹೋಬಳಿಯ ಎಮ್ಮೆಕೊಪ್ಪಲು ಗ್ರಾಮದ ಸುಬ್ಬೇಗೌಡರಿಗೆ ಸೇರಿದ ಬಾಳೆ ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದು, ಎರಡು ಕಾಲು ಎಕರೆ ಫಲಕ್ಕೆ ಬಂದಿದ್ದ ಏಲಕ್ಕಿ ಬಾಳೆ ಬೆಳೆ ಹಾಗೂ 30 ತೆಂಗಿನ ಮರಗಳು ಸಂಪೂರ್ಣ ಸುಟ್ಟು ಹೋಗಿದ್ದು, ಅಂದಾಜು ೮ಲಕ್ಷರೂ ನಷ್ಟವಾಗಿದೆ.

ತೋಟದ ಮಾಲಿಕರು ಬೇರೆ ಊರಿಗೆ ಹೋಗಿದ್ದ ವೇಳೆ ಘಟನೆ ಸಂಭವಿಸಿದ್ದು, ಅಕ್ಕಪಕ್ಕದವರು ಪಂಪ್‌ಸೆಟ್ ಮೂಲಕ ಬೆಂಕಿ ನಂದಿಸಿ, ಇತರೆಡೆಗೆ ಬೆಂಕಿ ಹರಡುವುದನ್ನು ತಪ್ಪಿಸಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ಇತ್ತು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: BJP Candidates; ತಿರುವನಂತಪುರಂನಿಂದ ರಾಜೀವ್ ಚಂದ್ರಶೇಖರ್: ಬಾನ್ಸುರಿಗೆ ಟಿಕೆಟ್

Advertisement

Udayavani is now on Telegram. Click here to join our channel and stay updated with the latest news.

Next