Advertisement

ಹುಣಸೂರು : ಕೈ ಹಿಡಿಯದ ಕೃಷಿ, ಮನನೊಂದ ಯುವರೈತ ಆತ್ಮಹತ್ಯೆಗೆ ಶರಣು

08:10 AM Sep 06, 2022 | Team Udayavani |

ಹುಣಸೂರು : ಕೃಷಿ ಚಟುವಟಿಕೆಗಾಗಿ ಲಕ್ಷಾಂತರ ರೂ ಸಾಲ ಮಾಡಿಕೊಂಡಿದ್ದ ಯುವ ರೈತರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಹಬ್ಬನ ಕುಪ್ಪೆಯಲ್ಲಿ ನಡೆದಿದೆ.

Advertisement

ಗ್ರಾಮದ ರೈತ ಅನಿಲ್(30) ಸಾವನ್ನಪ್ಪಿದ ದುರ್ದೈವಿ. ಇವರಿಗೆ ಪತ್ನಿ, ಒಂದು ಹೆಣ್ಣು ಮಗುವಿದೆ.

ಘಟನೆ ವಿವರ; ರೈತ ಅನಿಲ್ ತಂಬಾಕು ಬೆಳೆಗಾರರಾಗಿದ್ದು ಕೃಷಿಪತ್ತಿನ ಸಹಕಾರ ಸಂಘದಲ್ಲಿ 5 ಲಕ್ಷ. ಕರ್ನಾಟಕ ಬ್ಯಾಂಕಿನಲ್ಲಿ 2 ಲಕ್ಷ ಒಡವೆ ಅಡಮಾನ ಸಾಲ ಮಾಡಿದ್ದರು.

ಎರಡು ವರ್ಷಗಳಿಂದ ಕೊರೋನಾ, ಈ ಸಾಲಿನಲ್ಲಿ ಅತಿಯಾದ ಮಳೆಯಿಂದ ತಂಬಾಕು ಬೆಳೆ ಕೈಹತ್ತಿರಲಿಲ್ಲ. ಸಾಲ ತೀರಿಸುವ ಪರಿ ಎಂತು ಎಂಬ ಚಿಂತೆಯಲ್ಲಿದ್ದ. ಅನಿಲ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ, ಕೂಡಲೇ ಇವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಹಾಪ್‌ ಒಕ್ಸೊ ಎಲೆಕ್ಟ್ರಿಕ್‌ ಬೈಕ್‌ ರಿಲೀಸ್‌; ಎರಡು ವೇರಿಯೆಂಟ್‌ಗಳಲ್ಲಿ ಲಭ್ಯ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next