Advertisement

ಕುಡಿದ ಮತ್ತಿನಲ್ಲಿ ಮನೆಗೆ ಬಂದಿದ್ದ ಸಂಬಂಧಿಯನ್ನೇ ಚಾಕುವಿನಿಂದ ಇರಿದು ಕೊಲೆಗೈದ…

03:28 PM Jul 18, 2022 | Team Udayavani |

ಹುಣಸೂರು : ಕ್ಲುಲ್ಲಕ ಕಾರಣಕ್ಕೆ ಜಗಳವಾಡಿಕೊಂಡು ಮನೆಗೆ ಬಂದಿದ್ದ ಸಂಬಂಧಿಯನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಾಲೂಕಿನ ರಾಮನಹಳ್ಳಿಯಲ್ಲಿ ನಡೆದಿದೆ.

Advertisement

ಹುಣಸೂರು ತಾಲೂಕಿನ ರಾಮನಹಳ್ಳಿ ನಿವಾಸಿ ಸಿದ್ದನಾಯಕರ ಪುತ್ರ ಶೇಖರ್( 33)ಸಾವನ್ನಪ್ಪಿದ ದುರ್ದೈವಿ.

ಶೇಖರ್ ಜು.15 ರ ಸಂಜೆ ಇದೇ ಗ್ರಾಮದ ಕುಳ್ಳ ಸಿದ್ದನಾಯಕರ ಪುತ್ರ ಸಿದ್ದನಾಯಕನನ್ನು ಮಾತನಾಡಿಸಲು ಆತನ ಮನೆಗೆ ತೆರಳಿದ್ದ. ಮಾತನಾಡುವ ನಡುವೆ ಯಾವುದೋ ಕ್ಷುಲ್ಲಕ್ಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದು, ಇಬ್ಬರ ನಡುವೆ ಗಲಾಟೆ ನಡೆದಿದೆ ಈ ವೇಳೆ ಶೇಖರನಿಗೆ ಸಿದ್ದ ನಾಯಕ ಚಾಕುವಿನಿಂದ ಇರಿದು ತೀವ್ರವಾಗಿ ಗಾಯಗೊಳಿಸಿದ್ದ.

ಗಾಯಾಳು ಶೇಖರ್ ನನ್ನು ಮೈಸೂರಿನ ಕೆ.ವಿ.ಸಿ.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಜು.18ರ ಸೋಮವಾರ ಬೆಳಗ್ಗೆ ಶೇಖರ್ ಸಾವನ್ನಪ್ಪಿದ್ದಾನೆ. ಘಟನೆ ಕುರಿತು ಪೊಲೀಸರು ಸಿದ್ದನಾಯಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸಿಎಂ ಸ್ಟಾಲಿನ್: ಮತ ಚಲಾವಣೆ

Advertisement
Advertisement

Udayavani is now on Telegram. Click here to join our channel and stay updated with the latest news.

Next