Advertisement

ಕಾರು ಢಿಕ್ಕಿ ಹೊಡೆದು ವ್ಯಕ್ತಿ ಸಾವು : ನೊಂದಣಿಯಾಗದ ಬಿಳಿ ಬಣ್ಣದ ಕಾರಿಗಾಗಿ ಪೊಲೀಸರ ಶೋಧ

08:36 PM Jun 12, 2022 | Team Udayavani |

ಹುಣಸೂರು : ಅಪರಿಚಿತ ಕಾರು ಢಿಕ್ಕಿ ಹೊಡೆದ ಪರಿಣಾಮ ತೀವ್ರಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದ ಘಟನೆ ನಡೆದಿದ್ದು, ಈ ವೇಳೆ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿರುವ ಘಟನೆ ಹುಣಸೂರು ನಗರ ಸಮೀಪದ ಮೂಕನಹಳ್ಳಿ ಗೇಟ್ ಬಳಿ ನಡೆದಿದೆ.

Advertisement

ಮೃತರನ್ನು ಪಿರಿಯಾಪಟ್ಟಣ ತಾಲೂಕಿನ ಸೂಳೆಕೋಟೆಯ ಅಪ್ಪಾಜಾಚಾರಿಯವರ ಪುತ್ರ ರಾಜಾಚಾರಿ (58) ಎನ್ನಲಾಗಿದೆ.

ಘಟನೆ ವಿವರ:
ಮೈಸೂರು-ಬಂಟ್ವಾಳ ಹೆದ್ದಾರಿ-275 ರ ಮೂಕನಹಳ್ಳಿ ಗೇಟ್ ಬಳಿ ಕಳೆದ ಜೂ.8ರ ರಾತ್ರಿ 11ರ ವೇಳೆ ಮೂತ್ರವಿಸರ್ಜನೆ ಮಾಡುತ್ತಿದ್ದ ರಾಜಾಚಾರಿಗೆ ಮೈಸೂರು ಕಡೆಯಿಂದ ವೇಗವಾಗಿ ಬಂದ ಬಿಳಿ ಬಣ್ಣದ ನೊಂದಣಿಯಾಗಿರದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ತಲೆ, ಕೈ-ಕಾಲುಗಳಿಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಇದನ್ನೂ ಓದಿ : ಆಸ್ತಿ ವಿಚಾರದಲ್ಲಿ ಜಗಳ : ಗುಂಡು ಹಾರಿಸಿ ಮಹಿಳೆಯ ಕೊಲೆ, ಆರೋಪಿಯ ಬಂಧನ

ಮೂಕನಹಳ್ಳಿ ಗೇಟ್ ಬಳಿ ಇರುವ ಗ್ರೀನ್‌ಲ್ಯಾಂಡ್ ಹೋಟೆಲ್ ಬಳಿ ರಾಜಾಚಾರಿಗೆ ಅಪಘಾತ ನಡೆಸಿದ ಕಾರಿನ ಚಾಲಕ ಕಾರು ನಿಲ್ಲಿಸದೆ ಕೊಡಗಿನ ಕಡೆಗೆ ಪರಾರಿಯಾಗಿತ್ತು.ಈ ಬಗ್ಗೆ ನಗರ ಠಾಣೆ ಪೊಲೀಸರು ಗ್ರೀನ್‌ಲ್ಯಾಂಡ್ ಹೋಟೆಲ್‌ನ ಸಿ.ಸಿ.ಕ್ಯಾಮರಾ ಪರಿಶೀಲಿಸಿದ ವೇಳೆ ಅಪಘಾತ ನಡೆಸಿದ ಕಾರು ಅಪಘಾತ ನಡೆದ ಸ್ವಲ್ಪ ಹೊತ್ತಿನವರೆಗೆ ಅಲ್ಲೇನಿಂತು. ಯಾರೂ ಬಾರದೇ ಇದ್ದಾಗ ಸ್ಥಳದಿಂದ ಪರಾರಿಯಾಗಿರುವ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ತನಿಖೆ ಕೈಗೆತ್ತಿಕೊಂಡ ಪೊಲೀಸರು ಬಿಳಿ ಬಣ್ಣದ ಕಾರಿನ ಪತ್ತೆಗೆ ಬಲೆ ಬೀಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next