Advertisement

ಹುಣಸೂರು : ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು

11:26 AM Sep 12, 2022 | Team Udayavani |

ಹುಣಸೂರು : ಬಹಿರ್ದೆಸೆಗೆ ತೆರಳಿದ್ದ ಆದಿವಾಸಿ ವ್ಯಕ್ತಿ ಮೇಲೆ ಕರಡಿ ದಾಳಿ ನಡೆಸಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆಔಕೂರು ವಲಯದಲ್ಲಿ ನಡೆದಿದೆ.

Advertisement

ಆನೆಔಕೂರು ವಲಯದ ಲಿಂಗಾಪುರ ಹಾಡಿಯ ಆದಿವಾಸಿ ರಾಮಚಂದ್ರ ಗಾಯಗೊಂಡಾತ . ಅರಣ್ಯದಂಚಿನಲ್ಲಿ ಲಿಂಗಾಪುರ ಹಾಡಿ ಇದ್ದು. ರಾಮಚಂದ್ರ ಬಹಿರ್ದೆಸೆಗೆ ತೆರಳಿದ್ದ ವೇಳೆ ಕರಡಿ ದಾಳಿ ನಡೆಸಿದೆ. ರಾಮಚಂದ್ರನ ಕೂಗಾಟ ಕೇಳಿ ಹಾಡಿ ಮಂದಿ ಕೂಗಾಟ ನಡೆಸಿದ ವೇಳೆ ಕರಡಿ ಕಾಡಿನೊಳಕ್ಕೆ ಓಡಿ ಹೋಗಿದೆ.

ತಕ್ಷಣವೇ ಪಿರಿಯಾಪಟ್ಟಣದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next