Advertisement

ಹುಣಸೂರು: ಹಾವು ಕಚ್ಚಿ ಯುವಕ ಸಾವು

04:16 PM Dec 19, 2020 | Mithun PG |

ಹುಣಸೂರು:   ಹಾವು ಕಚ್ಚಿ ಯುವಕನೋರ್ವ ಸಾವನ್ನಪ್ಪಿದ ಘಟನೆ  ಹುಣಸೂರು ತಾಲ್ಲೂಕಿನ  ಕಾಳಬೋಚನಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಮೃತ ದುರ್ದೈವಿಯನ್ನು ಸಂತೋಷ್ (21) ಎಂದು ಗುರುತಿಸಲಾಗಿದೆ. ಈತ ಅಂತಿಮ‌ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದು, ಜಮೀನಿನಲ್ಲಿ ರಾಗಿ ಬೆಳೆ ಕಟಾವು ಮಾಡುವಾಗ ಘಟನೆ ಸಂಭವಿಸಿತ್ತು.

ಕೂಡಲೇ ಹನಗೋಡು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಗಾಗಿ ದಾಖಲಿಸಲಾಗಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಕೆ. ಆರ್ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.

ಆದರೇ ಚಿಕಿತ್ಸೆ ಫಲಕಾರಿಯಾಗದೆ ಸಂತೋಷ್ ಮೃತಪಟ್ಟಿದ್ದು,  ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಸಕ ಎಚ್.ಪಿ ಮಂಜುನಾಥ್ ಮೈಸೂರಿನ ಶವಾಗಾರಕ್ಕೆ  ಭೇಟಿ ನೀಡಿ, ಮೃತ ಯುವಕನ  ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

Advertisement

ಇದನ್ನೂ ಓದಿ: ಬದಲಾದ ಜೀವನ ಶೈಲಿ, ಜಂಕ್‌ಫುಡ್‌ ಸಂಸ್ಕೃತಿ…ಇದು ಹೃದಯಾಘಾತಕ್ಕೆ ಕಾರಣ

Advertisement

Udayavani is now on Telegram. Click here to join our channel and stay updated with the latest news.

Next