Advertisement

ಹುಣಸೂರು: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ; ಚಾಲಕ ಅಪಾಯದಿಂದ ಪಾರು

10:38 AM Nov 18, 2020 | Mithun PG |

ಹುಣಸೂರು: ತರಕಾರಿ ಕೊಂಡೊಯ್ಯುತ್ತಿದ್ದ ಇಂಡಿಗೊ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಹೊತ್ತಿ ಉರಿದಿರುವ ಘಟನೆ ನಗರದ ಬಿಇಓ ಕಚೇರಿ ಬಳಿ ಬುಧವಾರ ಬೆಳಗ್ಗೆ ನಡೆದಿದೆ.

Advertisement

ನಗರದ ಮೈಸೂರು ರಸ್ತೆಯ ಎಪಿಎಂಸಿಯಿಂದ ಮಲ್ಲೇಶ್ ಎಂಬುವವರು ತರಕಾರಿ ಕೊಂಡೊಯ್ಯುತ್ತಿದ್ದ ವೇಳೆ ಒಮ್ಮೆಲೆ ಹೊಗೆ ಕಾಣಿಸಿಕೊಂಡು ಬೆಂಕಿ ಹತ್ತಿಕೊಂಡಿದೆ. ಕಾರು ಮಾಲಿಕ ಮಲ್ಲೇಶ್ ಹೊರಕ್ಕೆ ಇಳಿದು ಸಹಾಯಕ್ಕಾಗಿ ದಾರಿಹೋಕರ ಮೊರೆ ಹೋಗಿದ್ದಾರೆ.

ಕೂಡಲೇ ಅಕ್ಕಪಕ್ಕದವರು ನೀರು ತಂದು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ನಂತರದಲ್ಲಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.

ಇದನ್ನೂ ಓದಿ: ಟ್ರಕ್ ಗಳ ನಡುವೆ ಭೀಕರ ಅಪಘಾತ: 11 ಮಂದಿ ದಾರುಣ ಸಾವು, 17 ಜನರಿಗೆ ಗಂಭೀರ ಗಾಯ

ಇದನ್ನೂ ಓದಿ: ಆಸ್ತಿಗಾಗಿ ದೊಡ್ಡಮ್ಮನ ಮಗನ ಕೊಲೆ : ಎಂಟು ತಿಂಗಳ ಬಳಿಕ ಆರೋಪಿ ಅಭಿಷೇಕ ಶೇಟ್‌ ಬಂಧನ

Advertisement

 

Advertisement

Udayavani is now on Telegram. Click here to join our channel and stay updated with the latest news.

Next