Advertisement

ಹುಣಸೂರು : ಜಾನುವಾರುಗಳಿಗೆ ನೀರು ಕುಡಿಸುವ ವೇಳೆ ಕಾಲುಜಾರಿ ಬಿದ್ದು ಮಹಿಳೆ ಸಾವು

10:56 PM May 29, 2022 | Team Udayavani |

ಹುಣಸೂರು : ಜಾನುವಾರುಗಳಿಗೆ ನೀರು ಕುಡಿಸುವ ವೇಳೆ ಕಾಲು ಜಾರಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಎಂ.ಆರ್.ಹೊಸಹಳ್ಳಿಯಲ್ಲಿ ಜರುಗಿದೆ.

Advertisement

ತಾಲೂಕಿನ ಹನಗೋಡು ಹೋಬಳಿಯ ಎಂ.ಆರ್.ಹೊಸಹಳ್ಳಿಯ ರೈತ ಮಂಚನಾಯಕರ ಪತ್ನಿ ರತ್ನಮ್ಮ(50) ಮೃತಪಟ್ಟಾಕೆ.

ಎಂದಿನಂತೆ ಹಸುಗಳನ್ನು ಮೇಯಿಸಿದ ನಂತರ ನೀರು ಕುಡಿಸಲು ಕೆರೆ ಬಳಿಗೆ ಹಸುಗಳನ್ನು ಕರೆದೊಯ್ದ ವೇಳೆ ಹಸುಗಳು ಕೆರೆಯೊಳಕ್ಕೆ ಇಳಿದು ರತ್ನಮ್ಮರನ್ನು ಎಳೆದಿದೆ. ಹಗ್ಗ ಹಿಡಿದಿದ್ದ ರತ್ನಮ್ಮನವರು ಆಯತಪ್ಪಿ ಕಾಲು ಜಾರಿ ಬಿದ್ದಿದ್ದಾರೆ. ಇತ್ತೀಚೆಗೆ ಬಿದ್ದ ಮಳೆಯಿಂದ ಕೆರೆ ಭರ್ತಿಯಾಗಿದ್ದು, ಕೆರೆ ಬಳಿ ಯಾರೂ ಇಲ್ಲದ್ದರಿಂದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆಂದು ಪತಿ ಮಂಚನಾಯಕ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಇನ್ಸ್ಪೆಕ್ಟರ್ ಚಿಕ್ಕಸ್ವಾಮಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹುಣಸೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆನಂತರ ಶವವನ್ನು ವಾರಸುದಾರಿಗೆ ಒಪ್ಪಿಸಲಾಯಿತು.

ಇದನ್ನೂ ಓದಿ : ನಾಲ್ಕನೇ ಅಲೆ ಭೀತಿ: ರಾಜ್ಯದಲ್ಲಿಂದು 241 ಮಂದಿಗೆ ಕೋವಿಡ್ ಸೋಂಕು

Advertisement

Udayavani is now on Telegram. Click here to join our channel and stay updated with the latest news.

Next