Advertisement

ಹುಣಸೂರು : ನಿಯಂತ್ರಣ ತಪ್ಪಿ ನಾಲೆಗೆ ಬಿದ್ದ ಬೈಕ್ : ಸಾವಾರ ಸ್ಥಳದಲ್ಲೇ ಸಾವು

10:25 PM Jun 26, 2022 | Team Udayavani |

ಹುಣಸೂರು : ಸವಾರನ ನಿಯಂತ್ರಣ ತಪ್ಪಿದ ಬೈಕ್ ನಾಲೆಗೆ ಬಿದ್ದು ಸವಾರ ಸಾವನ್ನಪ್ಪಿರುವ ಘಟನೆ ತಾಲೂಕಿನ ಮರೂರು ಬಳಿಯಲ್ಲಿ ನಡೆದಿದೆ.

Advertisement

ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಹಳೆಯೂರಿನ ಈರಯ್ಯರ ಪುತ್ರ ಮಹೇಶ್(47) ಮೃತಪಟ್ಟಾತ, ಇವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ.

ಘಟನೆ ವಿವರ : ಮೃತ ಮಹೇಶ್ ಹುಣಸೂರಿಗೆ ಬಂದು ಸ್ವಗ್ರಾಮಕ್ಕೆ ಮರೂರು ಬಳಿಯ ನಾಲಾ ಏರಿ ಮೇಲೆ ತನ್ನ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ನಾಲೆಗೆ ಬಿದ್ದು ಗಾಯಗೊಂಡಿದ್ದಾರೆ ಈ ವೇಳೆ ಮಹೇಶ್ ಮೇಲೇಳಲಾಗದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ,
ದಾರಿ ಹೋಕರು ನೋಡಿ ಬೈಕ್ ನಂಬರ್ ಮಾಲಿಕರ ಪತ್ತೆ ಮಾಡಿ ಪೋಷಕರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಪೊಲೀಸರು ಬಂದ ಮೇಲೆ ಶವವನ್ನು ಮೇಲೆತ್ತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿದ ಬಳಿಕ ಶವವನ್ನು ವಾರಸುದಾರರಿಗೆ ಒಪ್ಪಿಸಲಾಯಿತು.

ಈ ಸಂಬಂಧ ಮೃತ ಮಹೇಶ್ ಪುತ್ರ ಮನೋಜ್ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next