Advertisement

ರೈತರಿಗೆ ಶೀಘ್ರ ಪರಿಹಾರ ಒದಗಿಸಿ

07:31 PM May 10, 2020 | Team Udayavani |

ಹುಣಸಗಿ: ಆಲಿಕಲ್ಲು ಮಳೆಯಿಂದಾಗಿ ನಷ್ಟಕ್ಕೀಡಾದ ರೈತರಿಗೆ ಅತಿ ಶೀಘ್ರದಲ್ಲಿಯೇ ಪರಿಹಾರ ವಿತರಿಸಿ ರೈತರ ಜೀವನಮಟ್ಟ ಸುಧಾರಿಸಬೇಕು ಎಂದು ರಾಜ್ಯ ರೈತ ಸಂಘ ಮಹಿಳಾ ಘಟಕದ ರಾಜ್ಯ ವಿಭಾಗೀಯ ಕಾರ್ಯದರ್ಶಿ ಮಹಾದೇವಿ ಬೇನಾಳಮಠ ಆಗ್ರಹಿಸಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಆಲಿಕಲ್ಲು ಮಳೆಗೆ ರೈತರ ಭತ್ತ, ಇನ್ನಿತರ ಬೆಳೆಗಳು ನೆಲಕಚ್ಚಿ ನಾಶವಾಗಿದ್ದವು. ಇದರಿಂದಾಗಿ ರೈತ ಕಂಗಾಲಾಗಿದ್ದಾನೆ. ಪರಿಹಾರ ಮಾತ್ರ ಇನ್ನು ಬಂದಿಲ್ಲ ಎಂದು ದೂರಿದರು. ಮುಂಗಾರು ಹಂಗಾಮು ಪ್ರಾರಂಭವಾಗಲು ಇನ್ನು ಕೆಲವೇ ದಿನಗಳು ಉಳಿದಿವೆ. ಮಳೆ ಪ್ರಾರಂಭವಾಗುವ ಮುಂಚೆಯೇ ರೈತರಿಗೆ ಬಿತ್ತನೆ ಬೀಜ ಹಾಗೂ ಕೃಷಿ ಉಪಕರಣ, ರಾಸಾಯನಿಕ ಗೊಬ್ಬರ ಕೊರತೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೋವಿಡ್ ನಿಂದಾಗಿ ರೈತರು ನಲುಗಿದ್ದಾರೆ. ಜಿಲ್ಲಾಡಳಿತ ಕ್ರಮದಿಂದ ಜಿಲ್ಲೆಯಲ್ಲಿ ಕೊರೊನಾ ಹಸಿರು ವಲಯದಲ್ಲಿದೆ. ಹೀಗಾಗಿ ಕೋವಿಡ್  ಜಾಗೃತೆಯೊಂದಿಗೆ ರೈತರಿಗೆ ಅವಶ್ಯ ಬೇಕಾಗುವ ಎಲ್ಲ ಸೌಕರ್ಯ ತಲುಪುವಂತಾಗಬೇಕು. ಕೃಷಿ ಪತ್ತಿನ ಸಹಕಾರ ಸಂಘದಿಂದ ರೈತರಿಗೆ ಸಾಲ ದೊರಕಿಸಬೇಕು ಎಂದು ಆಗ್ರಹಿಸಿದರು. ರೈತ ಸಂಘಟನೆ ಪದಾಧಿಕಾರಿಗಳಾದ ರುದ್ರಗೌಡ ಮೇಟಿ, ಬಸವರಾಜ ಬೂದಿಹಾಳ, ಶರಣಮ್ಮ ಬೂದಿಹಾಳ, ಶಿವಲಿಂಗಯ್ಯ ಬೇನಾಳಮಠ ಸೇರಿದಂತೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next