Advertisement

ದೈವ ನರ್ತಕರಿಗೆ ಅವಮಾನ: ದೂರು

03:50 PM Jul 20, 2018 | |

ಬೆಳ್ತಂಗಡಿ: ಇಲ್ಲಿನ ಖಾಸಗಿ ಸಭಾಂಗಣದಲ್ಲಿ ಮದುವೆ ಸಮಾರಂಭದ ಅಲಂಕಾರ ತೆಗೆಯುವ ಸಂದರ್ಭದಲ್ಲಿ ದೈವದಂತೆ ನರ್ತಿಸಿ, ನರ್ತಕರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿರುವ ತಾ| ನಲಿಕೆಯವರ ಸಮಾಜ ಸೇವಾ ಸಂಘವು ಕ್ರಮಕ್ಕೆ ಆಗ್ರಹಿಸಿ ಗುರುವಾರ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಿದೆ.

Advertisement

ಅಲಂಕಾರಕ್ಕೆ ಬಳಸಿದ ಹೂವುಗಳನ್ನು ತೆಗೆಯುವ ಸಂದರ್ಭ ಕೆಲವು ಯುವಕರು ಹೂವಿನ ಮಾಲೆಗಳನ್ನು ಮೈ ಮೇಲೆ ಹಾಕಿಕೊಂಡು ದೈವದಂತೆ ನರ್ತಿಸಿದ್ದಾರೆ. ಅದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ. ಇದು ತುಳು ನಾಡಿನ ಸಂಸ್ಕೃತಿ ಹಾಗೂ ಜನರ ಭಕ್ತಿಯ ಮೇಲೆ ಮಾಡಿದ ಅವಮಾನವಾಗಿದೆ ಎಂದು ಆರೋಪಿಸಲಾಗಿದೆ.

ಇದು ದೈವ ನರ್ತನ ಸಮುದಾಯಕ್ಕೆ ಮಾಡಿದ ಅವಮಾನವಾಗಿದ್ದು, ಹೀಗಾಗಿ ಅದರ ವಿರುದ್ಧ ಕ್ರಮಕೈಗೊಳ್ಳಲು ದೂರಿನಲ್ಲಿ ಆಗ್ರಹಿಸಿದ್ದಾರೆ. ದೂರು ನೀಡುವ ಸಂದರ್ಭ ಸಂಘದ ಅಧ್ಯಕ್ಷ ಪ್ರಭಾಕರ ಎಸ್‌, ಉಪಾಧ್ಯಕ್ಷ ರಾಮು ಶಿಶಿಲ, ಮಾಜಿ ಅಧ್ಯಕ್ಷ ಸೇಸಪ್ಪ ನಲಿಕೆ, ಶೀನ ಲಾೖಲ, ಜಿಲ್ಲಾ ಯುವ ವೇದಿಕೆ ಕಾರ್ಯದರ್ಶಿ ಸುಬ್ರಾಯ ಕಲ್ಮಂಜ, ತಾ| ಯುವ ಸಂಘದ ಕಾರ್ಯದರ್ಶಿ ರಮೇಶ ಕೇಲ್ತಾಜೆ ಮೊದಲಾದವರು ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next