Advertisement

ಅನಾಥ, ಬುದ್ದಿಮಾಂದ್ಯನಾದರೂ ಮಾನವೀಯತೆಯನ್ನು ಮೈಗೂಡಿಸಿದ ಸಹೃದಯಿ

10:59 PM Jul 28, 2021 | Team Udayavani |

ದಾಂಡೇಲಿ : ಅವ ಎಲ್ಲರಂತಲ್ಲ. ಅನಾಥ, ಸ್ವಲ್ಪ ಬುದ್ದಿಮಾಂದ್ಯನಾದರೂ ಯಾರು ಕರೆದರೂ ಓಡೋಡಿ ಹೋಗಿ, ಅವರ ಕೆಲಸ ಕಾರ್ಯಗಳನ್ನು ಮಾಡುವ ಸಹೃದಯಿ. ಅವರಿವರ ಬಳಿ ಕೆಲಸ ಮಾಡಿಕೊಂಡು ಜೀವನ ಸಾಗಿಸುವಾತ.

Advertisement

ಅವರಿವರು ಕೊಟ್ಟದ್ರಲ್ಲೆ ಹೊಟೆ ತುಂಬಿಸಿಕೊಳ್ಳುವ ಈ ಯುವಕ ದಾಂಡೇಲಿ ನಗರದ ಸಂಡೆ ಮಾರ್ಕೆಟ್, ಲಿಂಕ್ ರಸ್ತೆಯಲ್ಲಿ ಎಲ್ಲರ ಪ್ರೀತಿಗೆ ಪಾತ್ರನಾದವನು.

ಬುದ್ದಿಮಂದ್ಯನಾಗಿದ್ದರೂ ಯಾರಿಗೂ ತೊಂದರೆಯನ್ನು ಕೊಡದೆ, ತನ್ನ ಪಾಡಿಗೆ ತನ್ನದೇ ಲೋಕದಲ್ಲಿರುವ ಈ ವ್ಯಕ್ತಿ ತನಗೆ ತಿನ್ನಲೆಂದು ನೀಡಿರುವ ಬಿಸ್ಕೆಟ್ ಗಳನ್ನು ಬಿಡಾಡಿ ನಾಯಿಗಳಿಗೆ ನೀಡುವುದರ ಮೂಲಕ ನಿಜವಾದ ಪ್ರಾಣಿ ವ್ಯಾಮೋಹ ಮತ್ತು ಕಾಳಜಿಯನ್ನು ಮೆರೆದಿದ್ದಾನೆ. ತಾನೆ ಇನ್ನೊಬ್ಬರು ಕೊಟ್ಟದ್ರಲ್ಲಿ ಹೊಟ್ಟೆ ತುಂಬಿಸುವುದಾದರೂ, ಏನು ಅರಿಯದ ಮುಗ್ದ ಪ್ರಾಣಿಗಳ ಬಗ್ಗೆ ಕಾಳಜಿ ತೋರುತ್ತಿರುವ ಈತನ ಮಾನವೀಯ ಕಾರ್ಯ ನಿಜಕ್ಕೂ ಪ್ರಶಂಸನೀಯ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next