Advertisement

ಹುಮನಾಬಾದ ಬಂದ್‌: ಬಗೆಹರಿಯದ ಗೊಂದಲ

06:30 PM Sep 20, 2022 | Team Udayavani |

ಹುಮನಾಬಾದ: ವಿವಿಧ ದಲಿತ ಸಂಘಟನೆಗಳು ಕರೆ ನೀಡಿದ ಹುಮನಾಬಾದ ಬಂದ್‌ ಕುರಿತು ತಾಲೂಕು ಆಡಳಿತ ವತಿಯಿಂದ ಸೆ.20ರಂದು ಹುಮನಾಬಾದ ಬಂದ್‌ ಇರುವುದಿಲ್ಲ ಎಂದು ಪ್ರಕಟಣೆ ಸಾರುತ್ತಿರುವ ಮಧ್ಯದಲ್ಲಿ ಸೋಮವಾರ ಸಂಜೆ ಗದ್ದಲ ಉಂಟಾಗಿದೆ.

Advertisement

ದಲಿತ ಹೋರಾಟ ಕ್ರಿಯಾ ಸಮಿತಿ ಮುಖಂಡರು ಪ್ರಚಾರ ವಾಹನ ತಡೆದು ಯಾವ ಕಾರಣಕ್ಕೆ ಅಪ ಪ್ರಚಾರ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಈ ಮಧ್ಯೆ ದಲಿತ ಮುಖಂಡ ಶಿವಪುತ್ರ ಮಾಳಗೆ ಹಾಗೂ ಪಿಎಐ ಮಂಜನಗೌಡ್‌ ಪಾಟೀಲ ಮಧ್ಯೆ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು.

ಬಂದ್‌ ಹಾಗೂ ಪ್ರತಿಭಟನೆ ಕುರಿತು ತಾಲೂಕು ಆಡಳಿತ ವತಿಯಿಂದ ಪರವಾನಗಿ ಪಡೆದು ಬಂದ್‌ ಮಾಡಲಾಗುತ್ತಿದೆ. ಆದರೆ, ಯಾವ ಕಾರಣಕ್ಕೆ ಜನರಿಗೆ ಗೊಂದಲ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳಿಗೆ ತಾಲೂಕು ಆಡಳಿತದ ಪರವಾನಗಿ ಪತ್ರ ತೋರಿಸಿದರು.

ಕೆಲ ಹೊತ್ತಿನಲ್ಲಿಯೇ ನೂರಾರು ಜನರು ಜಮಾಗೊಂಡಿದ್ದು, ಸ್ಥಳಕ್ಕೆ ಎಎಸ್ಪಿ ಶಿವಾಂಶು ರಾಜಪೂತ್‌, ಸಿಪಿಐ ಶರಣಬಸಪ್ಪ ಕೋಡ್ಲಾ, ಚಿಟಗುಪ್ಪ ಸಿಪಿಐ ಅಮೂಲ ಕಾಳೆ ಆಗಮಿಸಿ ಮುಖಂಡರ ಜೊತೆಗೆ ಚರ್ಚೆ ನಡೆಸಿದರು. ನಂತರ ಸಮಿತಿ ಅಧ್ಯಕ್ಷ ಅಂಕುಶ ಗೋಖಲೆ ಆಗಮಿಸಿ ಪೊಲೀಸ್‌ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next