Advertisement

ಹುಕ್ಕೇರಿ : ನಿವೃತ್ತ ಪಿಎಸ್‌ಐ ಪತ್ನಿಯ ಬರ್ಬರ ಹತ್ಯೆ ; ಚಿನ್ನಾಭರಣ ದೋಚಿ ಪರಾರಿ

05:03 PM Jun 15, 2022 | Team Udayavani |

 ಹುಕ್ಕೇರಿ :  ತಾಲೂಕಿನ ಹೊಸೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ 9. 30ರ ವೇಳೆಗೆ ಕಳ್ಳರು ಮನೆಗೆ ನುಗ್ಗಿ ನಿವೃತ್ತ ಪಿಎಸ್‌ಐ ಪತ್ನಿ ಬಾಯಿಗೆ ಬಟ್ಟೆ ತುರುಕಿ ಬರ್ಬರವಾಗಿ ಹತ್ಯೆಗೈದು, ಕಪಾಟು ಒಡೆದು ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

Advertisement

ಮಹಿಳೆಯ ಮೈಮೇಲೆ ಇದ್ದ ಚಿನ್ನಾಭರಣಗಳ ಸಮೇತ ದುಷ್ಕರ್ಮಿಗಳು ಪರಾರಿಯಾಗಿದ್ದು, ಘಟನೆ ಬಳಿಕ ಹೊಸೂರು ಗ್ರಾಮದ ಜನರು ಬೆಚ್ಚಿ ಬಿದ್ದಿದ್ದಾರೆ.

ಹತ್ಯೆಗೀಡಾದ ಮಹಿಳೆ ಮಾಲವ್ವಾ ಭೀಮರಾಯಿ ಅಕ್ಕತಂಗೇಹಾಳ(60)ಎನ್ನಲಾಗಿದೆ. ಆಕೆಯ ಪತಿ ಭೀಮರಾಯಿ ಅಕ್ಕತಂಗೇಹಾಳ ನಿವೃತ್ತ ಪಿಎಸ್‌ಐ ಆಗಿದ್ದು, ಅವರಿಗೆ ಇಬ್ಬರು ಪತ್ನಿಯರು ಎಂದು ಹೇಳಲಾಗಿದೆ.

ಮಹಿಳೆಯ ಮನೆಯ ಸುತ್ತ ಯಾವುದೇ ಮನೆಯಲ್ಲಿ ಜನರ ವಾಸ ಇರಲಿಲ್ಲ ಅದನ್ನು ಗಮನಿಸಿಯೇ ಕಳ್ಳರು ಮನೆಗೆ ನುಗ್ಗಿ ಈ ಕೃತ್ಯ ಎಸೆಗಿದ್ದಾರೆ. ಮೃತ ಮಾಲವ್ವಾ ಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬರೂ ಬಿಇ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದಾರೆ.

ಘಟನೆ ಗಮನಕ್ಕೆ ಬಂದ ತಕ್ಷಣ ಗೋಕಾಕ್ ಡಿಎಸ್‌ಪಿ ರಮೇಶಕುಮಾರ ನಾಯಕ, ಯಮಕನಮರಡಿ ಸಿಪಿಐ ರಮೇಶ ಛಾಯಾಗೋಳ, ಪಿಎಸ್‌ಐ ಬಿ.ವಿ.ನಾಮಗೌಡರ ಸ್ಥಳಕ್ಕೆ ಭೇಟಿ ನೀಡಿ ಶ್ವಾನದಳವನ್ನು ಕರೆಸಿ ಪರಿಶೀಲನೆ ನಡೆಸಿದರು. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಹೊಸೂರ ಗ್ರಾಮದಲ್ಲಿ ಸರಣಿ ಕಳ್ಳತನ ನಡೆದರೂ, 2019 ರಲ್ಲಿ ಮಾಜಿ ಸಚಿವ ಶಶಿಕಾಂತ ಅವರ ಮನೆಯಲ್ಲಿ ಕಳ್ಳತನ, ಆರು ತಿಂಗಳ ಹಿಂದೆ ಗ್ರಾಮದ ಶ್ರೀ ಲಕ್ಷ್ಮೀ ದೇವಸ್ಥಾನ, ಇತರ ದೇವಾಲಯಗಳ ಹುಂಡಿ ಕಳ್ಳತನ, ಮೂರು ಮನೆಗಳ ಕಳ್ಳತನ ನಡೆದಿತ್ತು. ಹಲವು ಪ್ರಕರಣಗಳು ಗ್ರಾಮದಲ್ಲಿ ನಡೆದಿದ್ದರೂ ಪೊಲೀಸರು ಕಳ್ಳರನ್ನು ಹಿಡಿಯಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಹೊಸೂರ ಗ್ರಾಮಸ್ಥರದ್ದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next