Advertisement

ಟೈರ್ ಸ್ಪೋಟಗೊಂಡು ಬೈಕಿಗೆ ಡಿಕ್ಕಿ ಹೊಡೆದ ಆಂಬ್ಯುಲೆನ್ಸ್ :ಕೋವಿಡ್ ರೋಗಿ ಸೇರಿ ಇಬ್ಬರು ಸಾವು

03:10 PM Sep 19, 2020 | sudhir |

ಹುಕ್ಕೇರಿ: ಅಥಣಿ ಕಡೆಯಿಂದ ಬೆಳಗಾವಿ ಆಸ್ಪತ್ರೆಗೆ ಕೋವಿಡ್ ರೋಗಿಯನ್ನು ಕರೆದುಕೊಂಡು ಹೋಗುತ್ತಿದ್ದ ಆಂಬ್ಯುಲೆನ್ಸ್‌ ಮುಂದಿನ ಟೈರ್‌ ಸಿಡಿದು ಎದುರು ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಾಯ್ದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಶುಕ್ರವಾರ ಜರುಗಿದೆ. ಹುಲ್ಲೋಳಿ-ಬಾಗೇವಾಡಿ ಮಾರ್ಗ ಮಧ್ಯೆ ಈ ದುರ್ಘ‌ಟನೆ ಸಂಭವಿಸಿದೆ.

Advertisement

ದ್ವಿಚಕ್ರ ವಾಹನ ಸವಾರ ಸಾಗರ ಮಲ್ಲಪ್ಪಾ ದೊಡವಾಡ (18) ಮೃತ ಯುವಕ. ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಗೋಪಾಲ ಅಣ್ಣಪ್ಪಾ ಮೂಲಿಮನಿ (18) ತೀವ್ರ ಗಾಯಗೊಂಡಿದ್ದು, ಗೋಕಾಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಬೆಳಗಾವಿಯಿಂದ ಮರಳಿ ರಬಕವಿ ಕಡೆಗೆ ಹೊರಟಿದ್ದರು.

ಆಂಬ್ಯುಲೆನ್ಸ್‌ ಪಲ್ಟಿಯಾಗಿದ್ದರಿಂದ ವಾಹನದಲ್ಲಿದ್ದ ಮಹಾರಾಷ್ಟ್ರ ಜತ್ತ ತಾಲೂಕಿನ ಸಿಂಧೂರ ಗ್ರಾಮದ ನಿವಾಸಿ 51 ವರ್ಷದ ಕೋವಿಡ್ ಸೋಂಕಿತ ಕೂಡ ಮೃತ ಪಟ್ಟಿದ್ದಾರೆ. ಸೋಂಕಿತನಿಗೆ ಅಥಣಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಗೆ ಕರೆ ತರುವಾಗ ಆಂಬ್ಯುಲೆನ್ಸ್‌ ಪಲ್ಟಿಯಾಗಿದೆ. ಹುಕ್ಕೇರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ : ಸ್ವಿಚ್ ಆಫ್ ಆಗಿದ್ದ ಮೊಬೈಲ್ ಆನ್ ಆಗುತ್ತಿದ್ದಂತೆ ಮಹಿಳೆಯ ಕೊಲೆ ಪ್ರಕರಣ ಬೆಳಕಿಗೆ ಬಂತು

Advertisement

Udayavani is now on Telegram. Click here to join our channel and stay updated with the latest news.

Next