Advertisement

ರಸ್ತೆಯಲ್ಲಿ ಬೃಹತ್‌ ಗುಂಡಿ; ಪ್ರಯಾಣಿಕರಿಗೆ ನಿತ್ಯ ನರಕ

12:52 PM Oct 19, 2021 | Team Udayavani |

ಶಹಾಬಾದ: ಭಂಕೂರ ಗ್ರಾಮದಿಂದ ಸಣ್ಣೂರ ಗ್ರಾಮಕ್ಕೆ ಹಾಯ್ದು ಹೋಗುವ ಭಂಕೂರ ಗ್ರಾಮದ ಕಮಾನ್‌ ಹತ್ತಿರದ ರಸ್ತೆಯಲ್ಲಿ ದೊಡ್ಡದಾದ ಗುಂಡಿಗಳು ಬಿದ್ದಿದ್ದು, ಪ್ರಯಾಣಿಕರು ಸಂಚರಿಸದಂತ ಪರಿಸ್ಥಿತಿ ಎದುರಾಗಿದೆ.

Advertisement

ಭಂಕೂರ ಗ್ರಾಮದಿಂದ ಹೊರಡುವ ಮುಖ್ಯ ರಸ್ತೆಯಿಂದ ಸಣ್ಣೂರಿಗೆ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಹೀಗೆ ಸಂಚಾರ ಮಾಡುವ ಪ್ರಯಾಣಿಕರ ವಾಹನಗಳು ಸೇರಿದಂತೆ ದ್ವಿಚಕ್ರ ಸವಾರರು, ಆಟೋ, ಗೂಡ್ಸ್‌ ವಾಹನಗಳು, ಲಾರಿ, ಬಸ್‌, ಟ್ರ್ಯಾಕ್ಟರ್‌ ಮುಂತಾದ ವಾಹನಗಳ ಸಂಚಾರಕ್ಕೆ ಸಂಚಕಾರ ಉಂಟಾಗಿದೆ.

ಭಂಕೂರ ಗ್ರಾಮದ ಕಮಾನ್‌ ಹತ್ತಿರವೇ ಈ ಬೃಹದಾಕಾರದ ಗುಂಡಿ ನೋಡಿದರೇ ಲೋಕೋಪಯೋಗಿ ಇಲಾಖೆ ಕಾರ್ಯವೈಖರಿ ಅರ್ಥವಾಗುತ್ತದೆ. ಈಗಾಗಲೇ ಹೆದ್ದಾರಿಗಳಲ್ಲಿ ಬಿದ್ದ ಗುಂಡಿಗಳನ್ನು ತಪ್ಪಿಸಲು ಹೋಗಿ ಅನೇಕ ಬೈಕ್‌ ಸವಾರರು ಪರಸ್ಪರ ಡಿಕ್ಕಿಹೊಡೆದುಕೊಂಡಿದ್ದಾರೆ. ತೆರಿಗೆ ನೀಡುವ ಸಾರ್ವಜನಿಕರಿಗೆ ಕನಿಷ್ಟ ಉತ್ತಮ ರಸ್ತೆ ನಿರ್ಮಾಣ ಮಾಡಿಕೊಡಬೇಕು ಎನ್ನುವ ಇರಾದೆ ಜನಪ್ರತಿನಿಧಿಗಳಿಗಿಲ್ಲ. ಹೆದ್ದಾರಿಯಲ್ಲಿ ದೊಡ್ಡ ಗುಂಡಿಗಳೇ ಬಿದ್ದಿವೆ. ಬಹುತೇಕ ಕಡೆಗಳಲ್ಲಿ ರಸ್ತೆ ಮೇಲಿನ ಪದರು ಕಿತ್ತು ಹೋಗಿದೆ. ಇದರಿಂದ ರಸ್ತೆಯಲ್ಲಿ ಸಂಚಾರ ಮಾಡಲು ಭಯವಾಗುತ್ತಿದೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ತಕ್ಷಣವೇ ಮುಚ್ಚಬೇಕು. ಸಾರ್ವಜನಿಕರ ಸುಗಮ ಸಂಚಾರದ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ದೈಹಿಕ-ಮಾನಸಿಕ ಆರೋಗ್ಯ ಮುಖ್ಯ

ರಸ್ತೆ ಮೇಲೆ ಗುಂಡಿಗಳು ಬಿದ್ದು ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದರಿಂದ ಅಪಘಾತಗಳಾಗುವ ಸಾಧ್ಯತೆಯಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು. -ಮಹ್ಮದ್‌ ಅಜರ್‌, ಶಹಾಬಾದ

Advertisement

ಭಂಕೂರ ಗ್ರಾಮದ ಐತಿಹಾಸಿಕ ಎರಡು ಉದ್ಭವ ಗಣಪಗಳನ್ನು ನೋಡಲು ಹಾಗೂ ದರ್ಶನ ಪಡೆಯಲು ನಿತ್ಯ ಸಾರ್ವಜನಿಕರು ಬರುತ್ತಾರೆ. ನೂರಾರು ಜನರು ಇದೇ ರಸ್ತೆಯಿಂದ ಸಂಚರಿಸುತ್ತಾರೆ. ಇಲ್ಲಿನ ಬೃಹದಾಕಾರದ ಗುಂಡಿ ಇವರಿಗೆಲ್ಲ ತೀವ್ರ ತೊಂದರೆ ತಂದೊಡ್ಡುತ್ತಿದೆ. -ಅಶೋಕ ಗುತ್ತೇದಾರ, ನಾಗರಿಕ

Advertisement

Udayavani is now on Telegram. Click here to join our channel and stay updated with the latest news.

Next