Advertisement

ಪಿಎಂ ಮೋದೀನ ಅಪ್ಪಿಕೊಳ್ಳಿ;12,000 ಕೋಟಿ ಲೂಟಿ ಮಾಡಿ : ರಾಹುಲ್‌

03:16 PM Feb 15, 2018 | Team Udayavani |

ಹೊಸದಿಲ್ಲಿ : ಬಿಲಿಯಾಧಿಪತಿ ನೀರವ್‌ ಮೋದಿ ಪಂಜಾಬ್‌ ನ್ಯಾಶನಲ್‌ ಬ್ಯಾಂಕಿಗೆ ಹಾಕಲಾಗಿರುವ ಬಹುಕೋಟಿ ಪಂಗನಾಮ ಹಗರಣದಲ್ಲಿ ಓರ್ವ ಮುಖ್ಯ ಆರೋಪಿಯಾಗಿ ದೇಶದಿಂದ ಪಲಾಯನ ಮಾಡಿರುವ ಹಿನ್ನೆಲೆಯಲ್ಲಿ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೊಸತೊಂದು ವಾಕ್ಸಮರವನ್ನು ಆರಂಭಿಸಿದ್ದಾರೆ.

Advertisement

ಟ್ವಿಟರ್‌ನಲ್ಲಿ  ರಾಹುಲ್‌ “ಗೈಡ್‌ ಟು ಲೂಟ್‌ ಇಂಡಿಯಾ’ ಎಂಬ ತಲೆಬರಹದಡಿ ಹೀಗೆ ಬರೆದಿದ್ದಾರೆ : 1. ಪಿಎಂ ಮೋದಿಯನ್ನು ಅಪ್ಪಿಕೊಳ್ಳಿ, 2. ದಾವೋಸ್‌ನಲ್ಲಿ ಮೋದಿ ಜತೆಗೆ ಕಾಣಿಸಿಕೊಳ್ಳಿ. ಈ ಶಕ್ತಿಯನ್ನು ಬಳಸಿಕೊಂಡು (ಎ) 12,000 ಕೋಟಿ ರೂ. ಲೂಟಿ ಮಾಡಿ; (ಬಿ) ಮಲ್ಯ ಹಾಗೆ ಸರಕಾರ ಬೇರೆ ಕಡೆ ನೋಡುತ್ತಿರುವಾಗ ದೇಶದಿಂದ ಪರಾರಿಯಾಗಿ.

ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ನೀಡಿರುವ ದೂರಿನಲ್ಲಿ ನೀರವ್‌ ಮತ್ತು ಮತ್ತು ಇತರರು ಬ್ಯಾಂಕಿಗೆ ಬಹುಕೋಟಿ ಪಂಗನಾಮ ಹಾಕಿದ್ದಾರೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈಗ ನೀರವ್‌ ಮೋದಿ ಅವರ ಮುಂಬಯಿಯಲ್ಲಿನ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ.ಅಲ್ಲದೆ ಸುಮಾರು 10 ತಾಣಗಳಲ್ಲಿ ದಾಳಿ ನಡೆಸುತ್ತಿದ್ದಾರೆ. 

ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ನಿನ್ನೆ ಬುಧವಾರ ಹೇಳಿಕೆಯೊಂದನ್ನು ಹೊರಡಿಸಿ ಬ್ಯಾಂಕಿಗೆ ಆಯ್ದ ಕೆಲ ಹೈ ಪ್ರೊಫೈಲ್‌ ಗ್ರಾಹಕರ ಖಾತೆ ಮೂಲಕ 11,400 ಕೋಟಿ ರೂ.ಗಳ ಪಂಗನಾಮದ ಹಗರಣ ನಡೆದಿರುವುದನ್ನು ತಾನು ಪತ್ತೆ ಹಚ್ಚಿರುವುದಾಗಿ ಹೇಳಿದೆ. ಅಂತೆಯೇ ಸಿಬಿಐ, ಜಾರಿ ನಿರ್ದೇಶನಾಲಯ ಈ ಹಗರಣದ ತನಿಖೆ ನಡೆಸುತ್ತಿವೆ. 

Advertisement

Udayavani is now on Telegram. Click here to join our channel and stay updated with the latest news.

Next