Advertisement

ಹುಬ್ಬಳ್ಳಿ ರ‍್ಯಾಲಿ; ಹಾರ ಹಾಕಲು ಪ್ರಧಾನಿ ಮೋದಿಯವರತ್ತ ನುಗ್ಗಿ ಬಂದ ಬಾಲಕ

04:52 PM Jan 12, 2023 | Team Udayavani |

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ನಗರದಲ್ಲಿ ನಡೆಸುತ್ತಿದ್ದ ರೋಡ್ ಶೋ ವೇಳೆ ಭದ್ರತಾ ಲೋಪ ಎನ್ನುವಂತೆ ಬಾಲಕನೊಬ್ಬ ಏಕಾಏಕಿ ಕಾರಿನತ್ತ ನುಗ್ಗಿ ಬಂದ ಘಟನೆ ನಡೆದಿದೆ.

Advertisement

ಪೊಲೀಸರ ಸರ್ಪಗಾವಲಿನ ನಡುವೆ ಬಾಲಕ ಹೂವಿನ ಹಾರ ಹಿಡಿದುಕೊಂಡು ಪ್ರಧಾನಿ ಮೋದಿ ಅವರಿಗೆ ಹಾಕಲು ಮುಂದಾಗಿದ್ದಾನೆ. ಈ ವೇಳೆ ಭದ್ರತಾ ಸಿಬಂದಿಗಳು ತಡೆಯಲು ಯತ್ನಿಸಿ ಹೂವಿನ ಹಾರ ಪಡೆದರು. ಆದರೆ ಪ್ರಧಾನಿ ಆ ಹಾರವನ್ನು ಕೈಯಲ್ಲಿ ಸ್ವೀಕರಿಸಿದರು.

ರೋಡ್ ಶೋ ವೇಳೆ ಭಾರಿ ಸಂಖ್ಯೆಯ ಪೊಲೀಸರನ್ನು ರಸ್ತೆಯ ಉದ್ದಗಲಕ್ಕೂ ಭದ್ರತೆಗಾಗಿ ನಿಯೋಜಿಸಲಾಗಿತ್ತು. ಭದ್ರತೆಯ ನಡುವೆಯೂ ಬಾಲಕ ಹಾರ ಹಿಡಿದುಕೊಂಡು ರಸ್ತೆಗೆ ನುಗ್ಗಿ ಬಂದಿದ್ದಾನೆ. ರಸ್ತೆಯ ಉದ್ದಕ್ಕೂ ಸಾವಿರಾರು ಮಾಡಿ ಅಭಿಮಾನಿಗಳು ನೆರೆದಿದ್ದು ಪ್ರಧಾನಿ ಮೋದಿ ಅವರು ಎಲ್ಲರತ್ತ ಕೈ ಬೀಸಿದರು. ಜನರು ಅಭಿಮಾನದಿಂದ ಹೂವಿನ ಮಳೆ ಗೆರೆದರು.

ಪ್ರಧಾನಿ ಮೋದಿ ಅವರು ಹುಬ್ಬಳ್ಳಿಯಲ್ಲಿ ಸಂಜೆ ರೈಲ್ವೇ ಮೈದಾನದಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಚಾಲನೆ ನೀಡುತ್ತಿದ್ದು,ಧಾರವಾಡದಲ್ಲಿ ಜ.12-16ರ ವರೆಗೆ ಉತ್ಸವ ನಡೆಯಲಿದ್ದು, ಅದರ ಉದ್ಘಾಟನ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಪ್ರಧಾನಿ ಮೋದಿಯವರ ಪಾಲ್ಗೊಳ್ಳುವಿಕೆ ಹಿನ್ನೆಲೆಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next