Advertisement

ಹುಬ್ಬಳ್ಳಿ: ಭೀಕರ ಅಪಘಾತ; ಬೈಕ್‌ ಸವಾರ ಸಜೀವ ದಹನ!

09:39 AM Oct 31, 2017 | Team Udayavani |

ಹುಬ್ಬಳ್ಳಿ: ನಗರದ ಹೊರವಲಯದ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್‌ ಸವಾರ ಸಜೀವ ದಹನಗೊಂಡಿದ್ದು, ಸಹ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. 

Advertisement

ರಾಷ್ಟ್ರೀಯ ಹೆದ್ದಾರಿ 4 ರಲ್ಲಿ  ಲಾರಿ ಮತ್ತು ಬೈಕ್‌ ಮುಖಾಮುಖಿ  ಢಿಕ್ಕಿ ಸಂಭವಿಸಿದ್ದು ಈ ವೇಳೆ ಬೈಕ್‌ ಲಾರಿಯ ಅಡಿಗೆ ನುಸುಳಿದ್ದು ಟ್ಯಾಂಕ್‌ನಿಂದ ಪೆಟ್ರೋಲ್‌ ಸೋರಿಕೆಯಾಗಿ ಕಿಡಿ ಹೊತ್ತಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೈಕ್‌ ಮತ್ತು ಮುಂಬದಿ ಸವಾರ ದಹನಗೊಂಡಿದ್ದಾರೆ ಎಂದು ವರದಿಯಾಗಿದೆ.

ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬಂದಿಗಳು ಬೆಂಕಿ ನಂದಿಸಿದ್ದಾರೆ.ಗಾಯಾಳುವನ್ನುಕಿಮ್ಸ್‌ ಆಸ್ಪತ್ರೆಗೆ ದಾಖಲಿಸಿಲಾಗಿದೆ.ಉತ್ತರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲಾರಿಯಲ್ಲಿದ್ದ ಕ್ಲೀನರ್‌ ಮತ್ತು ಚಾಲಕ ನಾಪತ್ತೆಯಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next