Advertisement

ತಮ್ಮನಿಗೆ ಚಾಕುವಿನಿಂದ ಇರಿದ ಅಣ್ಣ

09:49 AM Oct 06, 2022 | Team Udayavani |

ಹುಬ್ಬಳ್ಳಿ: ಚಿನ್ನದ ವಿಚಾರವಾಗಿ ಸಹೋದರರ ನಡುವೆ ಜಗಳವುಂಟಾಗಿ ವಿಕೋಪಕ್ಕೆ ಹೋಗಿ ತಮ್ಮನಿಗೆ ಅಣ್ಣ ಚಾಕುವಿನಿಂದ ಇರಿದು ಮಾರಣಾಂತಿಕ ಗಾಯಗೊಳಿಸಿದ ಘಟನೆ ವಿಜಯದಶಮಿ ದಿನವಾದ ಬುಧವಾರ ಬೆಳಗ್ಗೆ ಇಲ್ಲಿನ ಕೇಶ್ವಾಪುರ ಪಾರಸವಾಡಿಯ ವಿನಾಯಕ ಕಾಲೋನಿಯಲ್ಲಿ ನಡೆದಿದೆ.

Advertisement

ಘಟನೆಯಲ್ಲಿ ಸಾಗರ ಬಾಕಳೆ ಗಂಭೀರ ಗಾಯಗೊಂಡಿದ್ದು, ಸಂಜಯ ಎಂಬುವರೆ ಹಲ್ಲೆ ಮಾಡಿದವರು. ಸಾಗರ ಮನೆಯಲ್ಲಿದ್ದ ಚಿನ್ನವನ್ನು ಸಂಜಯ ತೆಗೆದುಕೊಂಡು ಹೋಗಿದ್ದ. ಪೂಜೆ ಸಲುವಾಗಿ ಅದನ್ನು ಕೇಳಲೆಂದು ತಂದೆಯೊಂದಿಗೆ ಅಣ್ಣನ ಮನೆಗೆ ಸಾಗರ ಹೋದಾಗ ಇಬ್ಬರ ನಡುವೆ ಜಗಳವಾಗಿದೆ.

ಅದು ವಿಕೋಪಕ್ಕೆ ಹೋದಾಗ ಸಾಗರ ಬಿಯರ್‌ನ ಖಾಲಿ ಬಾಟಲಿಯಿಂದ ಅಣ್ಣನಿಗೆ ಹೊಡೆದಿದ್ದಾನೆ. ಆಗ ಸಿಟ್ಟಾದವನೇ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಸಾಗರನ ಎದೆ-ಹೊಟ್ಟೆಗೆ ಇರಿದಿದ್ದು, ಗಂಭೀರ ಗಾಯಗೊಂಡಿರುವ ಸಾಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇವರ ನಡುವೆ ಆಸ್ತಿ ವಿಷಯವಾಗಿಯೂ ತಕರಾರು ಇದೆ.

ಘಟನೆಗೆ ಸಂಬಂಧಿಸಿ ಸಂಜಯನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next