Advertisement
ಬುಧವಾರ ಮಧ್ಯಾಹ್ನ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಕುಲಪತಿ ಪ್ರೊ| ಈಶ್ವರ ಭಟ್ಟ ಅವರು ಆಗಮಿಸಿದ್ದು ವಿದ್ಯಾರ್ಥಿಗಳ ಬೇಡಿಕೆಗಳು ಕುರಿತು ಮಾತನಾಡಿದ ಕುಲಪತಿಗಳು, ವಿಶ್ವವಿದ್ಯಾಲಯದ ನಿಯಮಗಳನ್ನು ಬಿಟ್ಟು ಯಾವುದೇ ಕಾರಣಕ್ಕೂ ನಿರ್ಣಯ ಕೈಗೊಳ್ಳಲು ಬರುವುದಿಲ್ಲ. ಕೆಲ ಬೇಡಿಕೆ ಈಡೇರಿಸಲು ಸಮಯ ಬೇಕಾಗುತ್ತದೆ. ಕಾನೂನು ಪದವಿ ವೃತ್ತಿಪರ ಕೋರ್ಸ್ ಆಗಿರುವುದರಿಂದ ಆನ್ಲೈನ್ ಪರೀಕ್ಷೆ ಸಾಧ್ಯವಿಲ್ಲ ಎಂದು ಪ್ರತಿಕ್ರಿಯೆ ನೀಡಿದರು. ಇದರ ನಡುವೆ ವಿದ್ಯಾರ್ಥಿಯೊಬ್ಬ ಆರಂಭದಿಂದಲೂ ಇದೇ ಉತ್ತರವನ್ನು ನೀಡುತ್ತಿದ್ದೀರಿ ಎಂದು ಕೋಪಗೊಂಡು ಮಸಿ ಎರಚಿದ್ದಾನೆ. ಈ ವೇಳೆ ಕುಲಪತಿಗಳ ಪಕ್ಕದಲ್ಲೇ ಇದ್ದ ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಮಸಿ ಬಿದ್ದಿದೆ ಇದರಿಂದ ಗೊಂದಲ ನಿರ್ಮಾಣವಾಗಿ ವಿದ್ಯಾರ್ಥಿ ಮುಖಂಡರನ್ನು ಪೊಲೀಸ್ರು ವಶಕ್ಕೆ ಪಡೆದು ಉಳಿದ ವಿದ್ಯಾರ್ಥಿಗಳನ್ನು ಚದುರಿಸಿದ ಘಟನೆ ನಡೆಯಿತು.
Advertisement
ಹುಬ್ಬಳ್ಳಿ :ಪ್ರತಿಭಟನೆ ವೇಳೆ ಕುಲಪತಿಗಳ ಮೇಲೆ ಮಸಿ :ವಿದ್ಯಾರ್ಥಿ ಮುಖಂಡ ಸೇರಿ ಹಲವರು ವಶಕ್ಕೆ
05:38 PM Jan 05, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.